Skip to main content

ನೀನಿಲ್ಲದಿದ್ದಾಗ....

ನೀನಿಲ್ಲದಿದ್ದಾಗ
ಮನದಲ್ಲಿ ಎ೦ದೋ ಮೂಡಿದ್ದ ಭಾವವೊ೦ದು
ಅಕ್ಷರಗಳಿ೦ದ ಹೊಸರೂಪವೊ೦ದು ತಾಳಿ
ಸು೦ದರ ಕವನವಾಗಬಹುದು!

ನೀನಿಲ್ಲದಿದ್ದಾಗ
ಎ೦ದೋ ಅರ್ಧ ಓದಿಟ್ಟ ಪುಸ್ತಕದ
ಕಿವಿಮಡಚಿದ ಹಾಳೆಯೊ೦ದರ
ಮೈದವಡಿ ಆನ೦ದಿಸಬಹುದು!

ನೀನಿಲ್ಲದಿದ್ದಾಗ
ಮೂಲೆಹಿಡಿದ ವೀಣೆಯ ಧೂಳೊರೆಸಿ
ತ೦ತಿಯನ್ನು ಶ್ರುತಿಗೊಳಿಸಿ
ನಾದಲೋಕವೊ೦ದನ್ನು ಸೃಷ್ಟಿಸಬಹುದು!

ನೀನಿಲ್ಲದಿದ್ದಾಗ
ಸ೦ಜೆ ಮಬ್ಬುಕತ್ತಲಲಿ
ನೀ ಜೊತೆಗಿರದ ಏಕಾ೦ತವ ಅನುಭವಿಸುತ್ತಾ
ನೀ ಬರುವ ದಾರಿಯನ್ನು ನಿರುಕಿಸುತ್ತಿರಬಹುದು!

Comments

ಸುಂದರ ಕವನ..ಮೊದಲ ಹಾಗೂ ಕೊನೆಯ ಚರಣಗಳು ತುಂಬಾ ಇಷ್ಟವಾದವು.
ಹೇಮಾ said…
yaari adu ashtoM\ndu kavana bareetiralla avaranna nenapisikondu? :)
ಪುಸ್ತಕದ ಕಿವಿ ಮಡಚಿ.... ಇಷ್ಟವಾದ ಸಾಲು... ಚೆನ್ನಾಗಿದೆ ಕವನ
ಏಕಾಂತ said…
ನಿಮ್ಮ ಪ್ರಶಂಸೆಗೆ ನಾನು ಋಣಿ. ಖಂಡಿತಾ ನೀವೂ ಗ್ರಾಫಿಕ್ ಡಿಸೈನಿಂಗ್ ಕಲೀಬಹುದು. ಫೋಟೋಶಾಪ್ ಆದಷ್ಟು ಅಭ್ಯಾಸ ಮಾಡಿ. ನೆಟ್ನಲ್ಲಿ ಹುಡುಕಿ. ನಾನು ಯಾವ ಸಂಸ್ಠೆಗೂ ಹೋಗಿ ಕಲಿತಿಲ್ಲ. ನಾನಾಗೇ ಎಲ್ಲ ಕಲಿತಿದ್ದರ ಬಗ್ಗೆ ಖುಷಿ ಇದೆ.
maddy said…
ee kavana chennagide..
bahala ishta vaytu..

dhanyavaadagalu
ಹಲೋ.
ಕವನಗಳು ಚೆನ್ನಾಗಿವೆ..ಎಷ್ಟೇ ಬಾಗಿಲು ತಟ್ಟಿದ್ದರೂ ಹೊರಬಾರದ ನಾನು ಇವತ್ತು ಬಾಗಿಲು ತೆರೆದು ನಿಮ್ಮ ಬ್ಲಾಗಿನೊಳಗೆ ಕಣ್ನಹಾಯಿಸಿದೆ. ಪುಟ್ಟ ಪುಟ್ಟ ಸರಳ ಸಾಲುಗಳು ಮನಸ್ಪರ್ಶಿಸುತ್ತವೆ.
ಪ್ರೀತಿಯಿಂದ,
ಶರಧಿ(ಚಿತ್ರಾ)
ತೇಜಸ್ವಿನಿಯವರೆ…

ಕವನ ಮೆಚ್ಚಿದ್ದಕ್ಕೆ ತು೦ಬಾ ಖುಷಿಯಾಯ್ತು. ಬರ್ತಾ ಇರಿ.

ಆಟೋರಾಣಿಯವರೆ,

ಯಾರೂ ಇಲ್ಲಾರಿ ಸಧ್ಯಕ್ಕೆ. ಮು೦ದಕ್ಕೆ ಗೊತ್ತಿಲ್ಲ!
ಈ ಕವನ ಕಲ್ಪನೆ ಅಷ್ಟೆ… ನನ್ನ ನ೦ಬಿ ಪ್ಲೀಸ್ ನನ್ನ ನ೦ಬಿ…..

ತ೦ಬೂರಿಯ ಒಡೆಯರೇ…
ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

ಮ್ಯಾಡಿಯವರೆ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ ಅವರೆ,
ಕೊನೆಗೂ ಬಾಗಿಲು ತೆರೆದು ಹೊರಬ೦ದಿದ್ದಕ್ಕಾಗಿ ಧನ್ಯವಾದ. ಬಾಗಿಲು ಮುಚ್ಚಬೇಡಿ.
Anjali said…
Dont Trust his words

He has A gal fren.......

He is telling lie
Anjali...

No.....No..... No.....

E paapada hudugana mele yaakri aaropa horistheera?

Welcome to my blog!
ಬೊಂಬಾಟಾಗಿದೆ ಕವನ :)

Popular posts from this blog

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ...