Skip to main content

ನೀ ಬರುವ ಹಾದಿಯಲಿ........... [ಭಾಗ ೧೧]

ನೀ ಬರುವ ಹಾದಿಯಲಿ ಅಪ್‍ಡೇಟ್ ಆಗಿದೆ. ಸುಚೇತಾ ಊರಿನಲ್ಲಿ ಏನೆಲ್ಲಾ ಮಾಡುತ್ತಾಳೆ ಎ೦ದು ತಿಳಿಯಲು ಕೆಳಗಿನ ಲಿ೦ಕ್ ಕ್ಲಿಕ್ಕಿಸಿ....


ನೀ ಬರುವ ಹಾದಿಯಲಿ.....

ಇದೇನು... ಕಾದ೦ಬರಿಗೆ ಹೊಸ ಬ್ಲಾಗ್ ಪ್ರಾರ೦ಬಿಸಿ, "ಅನುಭೂತಿ"ಯನ್ನು ಬರೇ ಅಪ್‍ಡೇಟ್ ಕೊಡಲು ಮಾತ್ರ ಸೀಮಿತ ಗೊಳಿಸಿದ್ದಾನೆ ಅ೦ದುಕೊ೦ಡಿರಾ? ಶೀಘ್ರದಲ್ಲೇ ಹೊಸ ಬರಹವೊ೦ದು ಬರುತ್ತದೆ ಅನುಭೂತಿಯಲ್ಲಿ.... :)

ಪ್ರೀತಿಯಿ೦ದ -

ಸುಧೇಶ್

Comments

ಬೇಗ ಇಲ್ಲೂ ಒಂದು ಏನಾದರೂ ಬರೀರಿ ಸರ್
ಅಲ್ಲೇ ಓದುತ್ತ ಇದಿವಿ ಬಹಳ ದಿನದಿಂದ
ಚೆನ್ನಾಗಿದೆ ಬರಹ
Veni said…
Please dont mind I am giving comments in English, but thats fact that even though if people know Kannada they would prefer to talk in other languages like their own mother tongue or Hindi or English, may be including me and you, right Mr. Tulu guy.

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ದಾರಿ...

ಹಲವಾರು  ದಾರಿಗಳಿದ್ದವು ಅಲ್ಲಿ... ಕೆಲವು ತಿರುವುಗಳೂ ಸಹ ನಾ ನಡೆವ ದಾರಿಯಲೇ ಏಕೆ ಎದುರಾದೆ? ನಿನ್ನ ಹಾದಿಗೆ ದೀಪವಾಗಲು ಹೋಗಿ ಮರೆತೇಬಿಟ್ಟೆ ನನ್ನ ಗಮ್ಯ..... ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು, ತು೦ಬಿಸಿಕೊಳ್ಳುವ ಆಸೆಯೂ ಇತ್ತು. ಹ೦ಬಲವಿತ್ತು ತಾರೆಗಳನ್ನು, ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ. ಅನ೦ತದ ಮಾತಿರಲಿ... ಕವಲೊಡೆಯಿತಲ್ಲ ದಾರಿ ನೂರು ಹೆಜ್ಜೆಗಳು ಮುಗಿಯುವ ಮೊದಲೇ.... ಹಾಗೊ೦ದು ವೇಳೆ ನೀ ನನಗೆ ಸಿಗದಿರುತ್ತಿದ್ದರೆ.... ರೆ..................... ಹುಡುಕುತ್ತಿದ್ದೇನೆ ಉತ್ತರ ಇನ್ನೂ...!