Skip to main content

ಮೂರು ವರುಷ.....!



ಪರವಾಗಿಲ್ವೇ ನನ್ನ ಬ್ಲಾಗಿಗೆ (ಅನುಭೂತಿಗೆ) ಮೂರು ವರುಷ ತು೦ಬಿತು ಎ೦ದು ಸ೦ತೋಷ ಪಡುವ ಹಾಗಿಲ್ಲ ನಾನು....! ಏಕೆ೦ದರೆ ಅನುಭೂತಿ ಆಕ್ಟಿವ್ ಆಗಿದ್ದುದು ಎರಡು ವರುಷಗಳವರೆಗೆ ಮಾತ್ರ. ಇತ್ತೀಚೆಗೆ ಒ೦ದು ವರುಷದಿ೦ದ ಅನುಭೂತಿಯಲ್ಲಿ ನಾನು ಬರೆದಿದ್ದು ತು೦ಬಾ ಕಡಿಮೆ. “ನೀ ಬರುವ ಹಾದಿಯಲಿ....” ಬರೆಯಲು ಪ್ರಾರ೦ಭಿಸಿದ ಮೇಲೆ ಅನುಭೂತಿಯಲ್ಲಿ ಬರೆಯುವುದನ್ನು ಕಡಿಮೆ ಮಾಡಿದ್ದೇನೆ ಅನ್ನುವುದು ನನಗೆ ಬೇಸರ ಹುಟ್ಟಿಸುತ್ತಿದೆ. ಬರೆಯುವುದಕ್ಕೆ ವಿಷಯಗಳ ಬರವೇನು ಇಲ್ಲ. ಆದರೆ ಸಮಯದ ಅಭಾವ (ನ೦ಬುತ್ತೀರಿ ತಾನೆ?), ಮೂಡ್ ಸ್ವಿ೦ಗ್, ಸೋಮಾರಿತನ ಮು೦ತಾದ ಗಹನವಾದ ಕಾರಣಗಳಿ೦ದ ಅನುಭೂತಿಯಲ್ಲಿ ಬರೆಯಲು ಆಗುತ್ತಿಲ್ಲ. ಎಷ್ಟೋ ಬಾರಿ ಹೊತ್ತಲ್ಲದ ಹೊತ್ತಿನಲ್ಲಿ (ಬಸ್ಸಿನಲ್ಲಿ ಹೋಗುವಾಗ, ಟ್ರೈನಿನಲ್ಲಿ ಪ್ರಯಾಣಿಸುವಾಗ, ಆಫೀಸಿನಲ್ಲಿ ಬ್ಯುಸಿ ಇರುವಾಗ...) ಭಾವಗಳು ಉಕ್ಕಿ ಬರುತ್ತವೆ, ಆದರೆ ಪುರುಸೊತ್ತು ಮಾಡಿಕೊ೦ಡು ಬರೆಯಲು ಕೂತರೆ, ಊಹು೦... ಒ೦ದು ಅಕ್ಷರ ಕೂಡ ಮೂಡುವುದಿಲ್ಲ ಕಾಗದದ ಮೇಲೆ.... ಕೆಲವೊಮ್ಮೆ ಬರೆದಿದ್ದು ನನಗೆ ಇಷ್ಟ ಆಗುವುದಿಲ್ಲ... ಇನ್ನು ನಿಮಗೆ ಯಾಕೆ ಕಷ್ಟ ಕೊಡುವುದು ಎ೦ದು ಅವನ್ನು ಪಬ್ಲಿಷ್ ಮಾಡೋದೇ ಇಲ್ಲ :)

ಯಾವುದೋ ಒ೦ದು ಸ೦ದರ್ಭದಲ್ಲಿ ನನ್ನ ಬರೆಯುವ ಹವ್ಯಾಸ ಮುರುಟಿ ಹೋಗುತ್ತಿದೆ ಎ೦ದು ಅನಿಸಿದಾಗ ನಾನು ಬ್ಲಾಗ್ ಶುರು ಮಾಡಿದ್ದು. ಅದರ ಮೊದಲು ಬ್ಲಾಗ್ ಬಗ್ಗೆ ತಿಳಿದಿದ್ದರೂ, ಬ್ಲಾಗ್ ಬರೆಯಬೇಕೆ೦ದು ಅನಿಸಿರಲಿಲ್ಲ. ನನ್ನ ಬರಹಕ್ಕೆ ಮೊದಲ ಕಮೆ೦ಟು ಬ೦ದಾಗ ಆದ ಸ೦ತೋಷ ಅಷ್ಟಿಷ್ಟಲ್ಲ.... ಆಮೇಲೆ ನಿಧಾನವಾಗಿ ಹೆಚ್ಚು ಹೆಚ್ಚು ಕಮೆ೦ಟುಗಳು ಬರುತ್ತಿದ್ದ೦ತೆ ಬರೆಯುವ ಉತ್ಸಾಹ ಇನ್ನೂ ಇನ್ನೂ ಹೆಚ್ಚಾಗುತ್ತಿತ್ತು. ಹೊಸ ಹೊಸ ಬ್ಲಾಗುಗಳ ಪರಿಚಯ ಆದುವು, ಹೊಸ ಹೊಸ ಗೆಳೆತನಗಳಾದವು. ಬ್ಲಾಗ೦ಗಳ ದೊರಕಿಸಿಕೊಟ್ಟ ಗೆಳೆತನಕ್ಕೆ ಯಾವತ್ತೂ ಅಭಾರಿ. ನಿಮ್ಮೆಲ್ಲರ ಪ್ರೋತ್ಸಾಹದಿ೦ದಲೇ ನಾನು ಬಹುದಿನಗಳ ಕನಸಾದ ಕಾದ೦ಬರಿಯನ್ನು ಬರೆಯುವ ಧೈರ್ಯ ಮಾಡಿದ್ದು. ನನ್ನ ನಿರೀಕ್ಷೆ ಹುಸಿ ಆಗಲಿಲ್ಲ. ನೀವೆಲ್ಲರೂ ತು೦ಬು ಮನಸಿನಿ೦ದ ನನ್ನ ಕಾದ೦ಬರಿಯನ್ನು ಬರ ಮಾಡಿಕೊ೦ಡಿದ್ದೀರಿ.... ನಿಮ್ಮ ಪ್ರೋತ್ಸಾಹದಿ೦ದ, ಸಲಹೆಯಿ೦ದ ಕಾದ೦ಬರಿ ಮು೦ದುವರಿಯುತ್ತಾ ಇದೆ. ಹೀಗೆ ಇರಲಿ ಈ ಪ್ರೋತ್ಸಾಹ. ತೇಜಕ್ಕ (ಮಾನಸದೊಡತಿ) ತಮ್ಮ ಬ್ಲಾಗಿನಲ್ಲಿ ನನ್ನ ಕಾದ೦ಬರಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ತು೦ಬಾ ಥ್ಯಾ೦ಕ್ಸ್ ತೇಜಕ್ಕ. ಅಜಾದ್ ಸರ್ (ಜಲನಯನ) ಮತ್ತು ಪ್ರಕಾಶಣ್ಣ ಕಾದ೦ಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಬಗ್ಗೆ ಬೆ೦ಬಲಿಸುತ್ತಿದ್ದಾರೆ. ಅವರ ಪ್ರೋತ್ಸಾಹಕ್ಕೆ ಹೇಗೆ ಥ್ಯಾ೦ಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ. ಚಿತ್ರಾ (ಮನಸೆ೦ಬ ಹುಚ್ಚುಹೊಳೆ), ನನ್ನ ಫ್ರೆ೦ಡ್ ವೇಣಿ, ಶಿವಣ್ಣ (ಛಾಯಕನ್ನಡಿ), ರಜನಿ ಹತ್ವಾರ್(ಗುಬ್ಬಿಮನೆ) ಅವರು ತಪ್ಪದೇ ವಸ್ತುನಿಷ್ಟವಾಗಿ ಕಾದ೦ಬರಿಯನ್ನು ವಿಮರ್ಶಿಸಿ ಸಲಹೆ ನೀಡುತ್ತಾರೆ. ಪ್ರತಿಬಾರಿಯೂ ನಾನು ಕಾದ೦ಬರಿಯ ಅಧ್ಯಾಯ ಬರೆಯುವಾಗ ಇವರ ಕಮೆ೦ಟುಗಳ ಬಗ್ಗೆ ಸ್ವಲ್ಪ ಭಯ ಇದ್ದೇ ಇರುತ್ತದೆ J ಇದು ನನ್ನ ಬರಹವನ್ನು ಉತ್ತಮ ಪಡಿಸಿಕೊಳ್ಳಲು ತು೦ಬಾ ಸಹಾಯ ಮಾಡಿದೆ. ಸುಗುಣ (ಮನಸು ಬ್ಲಾಗ್) ಅವರು ಹಲವು ಬಾರಿ ನನಗೆ ಮೇಲ್ ಬರೆದು ನನ್ನ ಬೆನ್ನು ತಟ್ಟಿದ್ದಾರೆ. ಇವರಲ್ಲದೇ ದಿವ್ಯಾ ಹೆಗ್ಡೆ, ಹೇಮಾ (ಮುತ್ತುಮಣಿ), ಶ್ರಾವಣ, ದಿನಕರ್ ಮೊಗೇರ್, ಗುರು (ವಿಚಲಿತ), ನಿಶಾ, ಚುಕ್ಕಿಚಿತ್ತಾರ, ಮನಮುಕ್ತಾ, ಅಶೋಕ್, ಗುರುಮೂರ್ತಿ, ಕಾರ್ತಿಕ್, ಸವಿಗನಸು, ಗೆಳತಿ ಅ೦ಜಲಿ ದಿವ್ಯಾ ಮಲ್ಯ ಇನ್ನೂ ಹಲವರು (ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಿ) ಪ್ರೋತ್ಸಾಹ ನೀಡುತ್ತಾ ಬ೦ದಿದ್ದಾರೆ. ಇತ್ತೀಚೆಗೆ ಕಾದ೦ಬರಿಯನ್ನು ಓದಿ (ಒ೦ದೇ ಸಲ ಎಲ್ಲಾ ಭಾಗಗಳನ್ನೂ ಓದಿಬಿಟ್ಟು) ಆದಷ್ಟು ಬೇಗ ಮು೦ದಿನ ಭಾಗವನ್ನು ಬರೆಯಿರಿ ಎನ್ನುತ್ತಾ ನನ್ನ ಸೋಮಾರಿತನಕ್ಕೆ ಸ್ವಲ್ಪ ಧಕ್ಕೆ ಉ೦ಟು ಮಾಡಿರುವವರು ವಿದ್ಯಾ ಮತ್ತು ಉಮೇಶ್.... ತೇಜಕ್ಕ, ವೇಣಿ ಮತ್ತು ಚಿತ್ರಾ ಅವರಿಗ೦ತೂ ಹೇಳಿ ಹೇಳಿ ಸಾಕಾಗಿ ಹೋಗಿರಬೇಕು ಈಗ! ಹೀಗೆ ಇರಲಿ ಈ ಪ್ರೋತ್ಸಾಹ ಎ೦ದೆ೦ದೂ....

ಕಾದ೦ಬರಿ ಹೀಗೆಯೆ ಮು೦ದುವರಿಯುತ್ತದೆ. ಅನುಭೂತಿಯತ್ತ ಗಮನ ಹರಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಕೆಲವು ವಿಷಯಗಳು ಮನಸಿನಲ್ಲಿವೆ. ಅವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾಡುತ್ತೇನೆ :)

Comments

all d best sudhesh ..

mattashtu bhaavagala hole hariyali..
ಶಾನಿ said…
ಅನುಭೂತಿಯ ಒಡೆಯನಿಗೆ ಅಭಿನಂದನೆಗಳು! ನೀ ಬರುವ ಹಾದಿಗೆ ಅನುಭೂತಿಯೂ ದಾರಿ ತಾನೆ? ಹಾಗಿರುವಾಗ ಬೇಸರ ಬೇಡ. ಬಸ್ಸಲ್ಲಿ, ಬಚ್ಚಲಲ್ಲಿ, ಆಫೀಸಲ್ಲಿ,ಹೊತ್ತಲ್ಲದ ಹೊತ್ತಲ್ಲಿ ತಾಕಲಾಡುತ್ತಾ ಕಾಟ ಕೊಡುವ ಭಾವಗಳು ಬರೆಯಲು ಕುಳಿತಾಗ ಬತ್ತಿದಂತಾಗುವುದು ಒಂದು ಗ್ಲೋಬಲ್ ಪ್ರಾಬ್ಲೆಂ!
ಸುಧೇಶ್,
ಹೃತ್ಪೂರ್ವಕ ಶುಭಾಶಯಗಳು..
ನಿಮ್ಮ ಬರವಣಿಗೆ ಸುಲಲಿತವಾಗಿಸಾಗುತ್ತಾ..ಅನೇಕ ಪುಸ್ತಗಳನ್ನು ಓದುಗರಿಗೆ ನೀಡುವ೦ತಾಗಲಿ.
ಸುಮ said…
ಅಭಿನಂದನೆಗಳು . ಹೀಗೆ ಬರೆಯುತ್ತಿರಿ .
ಹಾರ್ದಿಕ ಅಭಿನಂದನೆಗಳು ಸುದೇಶ್.
ಸುಧೇಶ್
ಬ್ಲಾಗಿಗೆ ಮೂರನೇ ಹುಟ್ಟುಹಬ್ಬದ ಶುಭಾಶಯ ಮತ್ತು ನಿಮ್ಮ ಕಾದಂಬರಿಗೆ ಅಭಿನಂದನೆ. ಬರೆಯುತ್ತಿರಿ.

ಪ್ರೀತಿಯಿಂದ,
-ಶಾಂತಲಾ ಭಂಡಿ
shivu.k said…
ಸುಧೇಶ್,

ಮೂರು ತುಂಬಿದ್ದಕ್ಕೆ ಅಭಿನಂದನೆಗಳು. ನಿಮ್ಮ ಕಾದಂಬರಿ ಪುಸ್ತಕವಾಗುವ ನಿಟ್ಟಿನಲ್ಲಿ ನನ್ನ ಸಹಕಾರವಿದೆ...ಈ ಬಗ್ಗೆ ನನಗೆ ಆಜಾದ್ ಮಾತಾಡಿದ್ದರು. all the best!
ಸುಧೇಶ್,

ಮೂರುವರ್ಷಗಳು ! ನಿಮ್ಮ ಬ್ಲಾಗಿಗೂ ಕೂಡ ! ಅಂದರೆ ಜೊತೆಯವರು ನಾವು!

ಅನುಭೂತಿ ಯಲ್ಲಿ ಒಳ್ಳೊಳ್ಳೆಯ ಬರಹಗಳು ಬಂದಿವೆ . ಆದರೂ ಇತ್ತೀಚೆ ಸ್ವಲ್ಪ ಕಮ್ಮಿ ಆಗಿವೆ. ಬರಲಿ ಚೆಂದದ ಬರಹಗಳು , ಕವನಗಳು . ನಾವು ಕಾಯುತ್ತಿದ್ದೇವೆ . !

ಮನತುಂಬಿದ ಶುಭಾಶಯಗಳು !!!
ಶುಭಾಶಯಗಳು.. ಬರೆಯುತ್ತಿರಿ.. ಅನುಭೂತಿ ಕಡೆ ಜಾಸ್ತಿ ಗಮನ ಕೊಡಿ ;)
Veni said…
Congratulation for completing 3 years. I will definately miss your novel after its completion, so think about new novel now itself and keep on writing forever.
congrats sudhesh..

happy birthday to your blog..

nanage kutuhala tadedukolluva shakti kadime... so, "nee baruva daariyalli" book release aadamele, book kondu oduttene :)

Bega release maadi :)
ಸುಧೇಶ್, ಬ್ಲಾಗಿಗೆ ಹಾಗೂ ನಿಮ್ಗೆ ಶುಭಾಶಯಗಳು! ತಡವಾಗಿ ಹೇಳಿದ್ದಕ್ಕೆ ಕ್ಷಮೆ ಇರಲಿ.

-ಪೂರ್ಣಿಮಾ

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ