Skip to main content

ಕವನ..... ಕನಸು.....

ನನ್ನ ಒ೦ದೊ೦ದು ಕನಸಿನಲಿ....
ಅರಳುತ್ತವೆ... ಕಮರುತ್ತವೆ....
ನೂರಾರು ಕವನಗಳು
ನೂರಾರು ಆಸೆಗಳು....
ಎದೆ ಉಕ್ಕಿ ಹರಿದಾಗ ಭಾವಗಳು
ಮನಕಲಕಿ ಅತ್ತಾಗ ನೋವುಗಳು
ಒ೦ದೊ೦ದು ಕನಸಿನಲ್ಲೂ
ಭಾವನೆಗಳು ಹರಿಯುತ್ತವೆ
ಕವನದ ಸಾಲುಗಳಾಗಿ
ಕಲ್ಪನೆಯಾಗಸದಿ ಹಕ್ಕಿಯಾಗಿ....
ಅದೇ ನಾ ಬರೆಯಹೊರಟಾಗ
ಎನೇನೂ ತೋಚದ೦ತಾಗಿ
ನಡುಗುತ್ತವೆ ಬೆರಳುಗಳು
ಅಳುಕುತ್ತವೆ ಭಾವನೆಗಳು
ಸ್ಥಗಿತಗೊಳ್ಳುತ್ತವೆ ಸ್ಫೂರ್ತಿಗಳು
ಸುಪ್ತವಾಗುತ್ತವೆ ಸದ್ದುಮಾಡುವ ಕಲ್ಪನೆಗಳು
ಯಾವ ಭಾವವೂ ಇಲ್ಲದೆ ಶೂನ್ಯ ತು೦ಬಿದ ಮನ,
ತು೦ಬದೇ ಉಳಿದಿರುವ ಖಾಲಿ ಹಾಳೆಗಳು ಅಣಕಿಸುತ್ತವೆ!
ಪುನ: ಜಾರುತ್ತವೆ ಭಾವಗಳು
ಇಳಿಯುತ್ತವೆ ಕನಸುಗಳು
ತಮ್ಮ ಬೇರುಗಳೆಡೆಗೆ.....

[ಇದು ನಾನು ಮೊದಲನೆಯ ಪಿ.ಯು.ಸಿ. ಓದುತ್ತಿರುವಾಗ ಬರೆದಿದ್ದು. ಎಡಿಟ್ ಮಾಡದೇ ಹಾಗೆ ಹಾಕಿದ್ದೇನೆ :)]

Comments

ಮನಸು said…
ಚೆನ್ನಾಗಿದೆ ಪಿ.ಯು.ಸಿ ಯಲ್ಲೇ ಇಷ್ಟು ಚೆಂದ ಬರೆದಿದ್ದೀರಿ. ಸಾಗಲಿ ಕವನದ ಪಯಣ
shivu.k said…
ಸುಧೇಶ್,

ಭಾವನೆಗಳ ಬಗ್ಗೆ ಪಿ ಯು ಸಿ ಯಲ್ಲೇ ಇಷ್ಟು ಚೆನ್ನಾಗಿ ಕವನ ಬರೆದಿದ್ದೀರಲ್ಲ..
ಸುಧೇಶ್ ಸೊಗಸಾದ ಕವನ. ಧನ್ಯವಾದಗಳು..
ನನ್ನ ಒ೦ದೊ೦ದು ಕನಸಿನಲಿ....
ಅರಳುತ್ತವೆ... ಕಮರುತ್ತವೆ....
ನೂರಾರು ಕವನಗಳು
ನೂರಾರು ಆಸೆಗಳು...!
ಸುಧೇಶ್..ಈಗಲೂ ಬದುಕಿನ 'ಹೆಜ್ಜೆ'ಗಳೇ ಕವನವಾಗಬಹುದು..ಬರೀತಾ ಇರಿ.
old is Gold ಅಲ್ವಾ?
-ಧರಿತ್ರಿ
Geetha said…
ಸುಧೇಶ್,
ಚೆನ್ನಾಗಿದೆ ಹಳೆಯ ಕವನ. ಈಗ ನಿಮ್ಮ ಕವನಗಳ ಸ್ಥಿತಿ ಹಾಗಿಲ್ಲವೆಂದುಕೊಳ್ಳುವೆ

ಹಾಗೇನಾದರು ಇದ್ದರೆ ಹಾಳೆ ಹಿಡಿಯದೆ ಕನಸಿಂದ ಸೀದ ಕೀಲಿಮಣೆಗಿಳಿಸಿಬಿಡಿ ನಿಮ್ಮ ಕವನಗಳನ್ನು ... ನಿಮ್ಮ ಓದುಗರಿಗಾಗಿ ;)
ಕವನ ತುಂಬಾ ಹಿಡಿಸಿತು ಸುಧೇಶ್!

ಹೀಗೆ ಬರೆಯುತ್ತಿರಿ, ಸಾಗುತ್ತಿರಲಿ
ಪದ್ಯ, ಗದ್ಯ, ಲಲಿತ ಪ್ರಬಂಧ,
ಕಾವ್ಯ, ಕನಸು, ಪ್ರವಾಸ ಕಥನ
ARUN MANIPAL said…
abba PUC nalli isht chennag bardidira..great..nice...
Veni said…
Nice poem, why r u not posting any new write ups, posting only the old ones, dont u have any new theme or time to write?
Ittigecement said…
ಸುಧೇಶ್....

ಭಾವಗಳನ್ನು
ಶಬ್ಧಗಳಲ್ಲಿ
ಹೇಳುವದು ಕಷ್ಟ ಅಂತ..
ಚಂದದ ಕವನವನ್ನೇ ಬರೆದಿದ್ದೀರಲ್ಲ....

ನನಗಂತೂ ಬಹಳ ಇಷ್ಟವಾಯಿತು....

ಅಭಿನಂದನೆಗಳು..
ಸುಂದರವಾದ ಕವಿತೆಗೆ..
This comment has been removed by the author.
Sudesh,

Its a difficult task for me to understand the poems in the first place as words are used very trickily in the poems by the poets.

What i was able to make out from this, is that you wrote about the theme "poems" and the things that one writes, tries to put up in poems.

It was good i guess... :-P

Other things,

Enough of old bites,Come up with something new.

BTW, you dint consider my suggestion of increasing the font size.It was/is upto you after all.

If you happen to write any big post, which generally takes time for me to read; i may not read it for the same reason.

Cheers
Mahesh
Unknown said…
ಚೆನ್ನಾಗಿದೆ...
ಏನಿದು ಸುಧೇಶ್,
ಆಗಿನ ಕಾಲದಲ್ಲಿ ಎಷ್ಟೆಲ್ಲಾ ಯೋಚನೆ, ಕನಸು, ಕವನ, ಭಾವನೆ!!!!

very good!
ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾದಗಳು... ನಿಮ್ಮ ನಲ್ಮೆಯ ನುಡಿಗಳೇ ನನ್ನ ಕು೦ಟುತ್ತಾ ಸಾಗಿರುವ ಬರವಣಿಗೆಗೆ ಸ್ಫೂರ್ತಿ:)

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ