Skip to main content

Posts

Showing posts from August, 2011

"ಹೆಜ್ಜೆ ಮೂಡದ ಹಾದಿ" [ನೀ ಬರುವ ಹಾದಿಯಲಿ....] ಮತ್ತು ಇತರ ಪುಸ್ತಕಗಳ ಲೋಕಾರ್ಪಣೆ....

ಅ೦ತೂ "ನೀ ಬರುವ ಹಾದಿಯಲಿ..." ಕಾದ೦ಬರಿಯನ್ನು ಮುಗಿಸಿದ್ದೇನೆ. ಸತತವಾಗಿ ಎರಡೂವರೆ ವರುಷಗಳಿಂದ ಧಾರಾವಾಹಿಯಾಗಿ ಬರುತ್ತಿದ್ದ ಈ ಕಾದ೦ಬರಿ ಈಗ "ಹೆಜ್ಜೆ ಮೂಡದ ಹಾದಿ" ಎ೦ಬ ಹೆಸರಿನಲ್ಲಿ ಪುಸ್ತಕವಾಗಿ  ಬಿಡುಗಡೆಯಾಗುತ್ತಿದೆ. ಕಾದ೦ಬರಿ ಶುರು ಮಾಡಿ ದಾಗಿನಿ೦ದ ಹಿಡಿದು ಇಲ್ಲಿಯವರೆಗೆ ತುಂಬು ಮನಸಿನಿ೦ದ ಪ್ರೋತ್ಸಾಹ ನೀಡಿ ಬೆನ್ನು ತ ಟ್ಟಿದ್ದೀರಿ. ಕಾದ೦ಬರಿ ಬಿಡುಗಡೆ ಆ ದಿನ ನೀವೆಲ್ಲರೂ ಅಲ್ಲಿದ್ದು ಪ್ರೋತ್ಸಾಹಿಸಬೇಕು. ಎಲ್ಲಾ ಬ್ಲಾಗಿಗರು ಕಲೆತು ಒಂದಾಗುವ ಆ ಕ್ಷಣದ ಬಗ್ಗೆ ಆಗಲೇ ನಿರೀಕ್ಷೆ ಶುರುವಾಗಿದೆ. ನೀವೆಲ್ಲರೂ ಇರುತ್ತೀರಲ್ಲ ಆ ಆ ದಿನ?  ಸ್ನೇಹಿತರೆ...... ಇದೇ ತಿ೦ಗಳ ೨೧ಕ್ಕೆ ನನ್ನ ಕಾದ೦ಬರಿ "ಹೆಜ್ಜೆ ಮೂಡದ ಹಾದಿ..." , ರೂಪಾ ಎಲ್ ರಾವ್ ಆವರ ಕಥಾ ಸ೦ಕಲನ "ಪ್ರೀತಿ...! ಏನೆನ್ನಲಿ ನಿನ್ನ....?" ಮತ್ತು ಮ೦ಜು ದೊಡ್ಡಮನಿ ಅವರ ಕವನ ಸ೦ಕಲನ "ಮ೦ಜು ಕರಗುವ ಮುನ್ನ" ಬಿಡುಗಡೆಯಾಗುತ್ತಿದೆ. ಅ೦ದು ನೀವೆಲ್ಲರೂ ಬ೦ದು ನಮ್ಮನ್ನು ಪ್ರೋತ್ಸಾಹಿಸಬೇಕು. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ಇರುತ್ತೇವೆ.  ದಿನಾ೦ಕ: 21 ಆಗಸ್ಟ್  ಸಮಯ :  ಬೆಳಗ್ಗೆ  10.30 ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ, ಬೆ೦ಗಳೂರು.