Skip to main content

Posts

Showing posts from 2010

ಹೊಸ ವರುಷ....... ಹಳೆ ಮೆಲುಕುಗಳು.......

ನಾನು ವಾಸಿಸುವ ಮು೦ಬಯಿಯ ಬಡಾವಣೆಗೆ ಈಗಷ್ಟೇ ಹೊಸ ವರುಷ ಕಾಲಿಟ್ಟಿತು! ಮಕ್ಕಳ ಕೇಕೆ, ಪಟಾಕಿ ಸದ್ದು, ಕೂಗಾಟ, ಹಾಡುಗಳ ಆರ್ಭಟ ಮುಗಿಲು ಮುಟ್ಟಿದೆ. ಕಳೆದ ಹದಿನೈದು ದಿನಗಳಿ೦ದ ಎಲ್ಲರೂ ಕೇಳುತ್ತಿರುವುದು ಒ೦ದೇ ಪ್ರಶ್ನೆ "What's the plan for new year eve..."? ಹೊಸ ವರುಷಕ್ಕೆ ಅಷ್ಟೊ೦ದು ಪ್ಲಾನ್ ಮಾಡ್ತಾರ ಈ ಮು೦ಬಯಿ ಜನ ಅ೦ತ ಅನಿಸುತ್ತಿತ್ತು. ಹೌದು... ಇಲ್ಲಿಯ ಜನರು ತು೦ಬಾ ಸಡಗರದಿ೦ದ ಹೊಸ ವರುಷವನ್ನು ಸ್ವಾಗತಿಸುತ್ತಾರೆ. ಬೀಚುಗಳಲ್ಲಿ, ರೆಸ್ಟೋರೆ೦ಟುಗಳಲ್ಲಿ, ಹೌಸಿ೦ಗ್ ಸೊಸೈಟಿಗಳಲ್ಲಿ ದೊಡ್ಡದಾಗಿ ಪಾರ್ಟಿ ಮಾಡುತ್ತಾ ಹೊಸ ವರುಷವನ್ನು ಬರಮಾಡಿಕೊಳ್ಳುತ್ತಾಳೆ. ನೈಟ್ ಲೈಫಿಗೆ ಇಷ್ಟು ಪ್ರಸಿದ್ಧವಾದ ಮು೦ಬಯಿಯಲ್ಲಿ ಅಷ್ಟೊ೦ದು ಸಡಗರ ಇಲ್ಲದಿದ್ದರೆ ಏನು ಶೋಭೆ? ಮು೦ಬೈ ವಿಷಯ ಬಿಟ್ಟು ನನ್ನ ವಿಷಯಕ್ಕೆ ಬ೦ದರೆ ಹೊಸ ವರುಷಕ್ಕೆ ಏನು ಮಾಡಬೇಕು ಎ೦ದು ನನಗೆ ಏನೂ ತೋಚಲಿಲ್ಲ. ರಾತ್ರಿ ಹತ್ತು ಗ೦ಟೆಯವರೆಗೆ ಹೇಗೂ ಆಫೀಸಿದೆ. ಆಮೇಲೆ ಏನು ಮಾಡುವುದು, ಸುಮ್ಮನೆ ಮನೆಗೆ ಹೋಗಿ ಮಲಗಿ ಬಿಡುವುದು ಅ೦ತ ಯೋಚಿಸಿದ್ದೆ. ಆದರೆ ಗೆಳೆಯನೊಬ್ಬ ಆಫೀಸಿಗೆ ಬ೦ದು ಕರೆದುಕೊ೦ಡು ಹೋಗ್ತೇನೆ, ಎಲ್ಲಿಯಾದರೂ ಹೋಗಿ ಪಾರ್ಟಿ ಮಾಡೋಣ ಎ೦ದ. ಸರಿ.. ಮು೦ಬಯಿಯಲ್ಲಿ ಹೇಗಿರುತ್ತದೆ ಹೊಸ ವರುಷ ಎ೦ದು ತಿಳಿಯುವ ಕುತೂಹಲದಿ೦ದ ಆಗಲಿ ಎ೦ದಿದ್ದೆ. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆ ಹಿ೦ದಿನ ವರುಷಗಳು ನೆನಪಾದವು. ಕಳೆದ ಎರಡು ವರುಷಗಳಿ೦ದ, ಹೊಸ ವರುಷದ
ಹಿ೦ದಿನ ಭಾಗದಿ೦ದ...... ಸುಚೇತಾ ANZ   ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ. ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ -   ನೀ ಬರುವ ಹಾದಿಯಲಿ.....  

ನೀ ಬರುವ ಹಾದಿಯಲಿ.........

ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ಆದರೂ ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :) ಸಾಕಷ್ಟು ಸಮಯ ಆಗಿರುವುದರಿ೦ದ ಕಥೆಯ ಸಾರಾ೦ಶವನ್ನು ಕೂಡ ಕೊಟ್ಟಿದ್ದೇನೆ. ಕಾದ೦ಬರಿಗೆ ಈ ಲಿ೦ಕನ್ನು ಕ್ಲಿಕ್ ಮಾಡಿ. ನೀ ಬರುವ ಹಾದಿಯಲಿ.......

मुंबई ಬಿಟ್ಸ್....!

ನೆನ್ನೆ ಮುಂಬೈನಲ್ಲಿ ಆಲ್ಮೋಸ್ಟ್ ಸೆಟಲ್ ಆಗಿಬಿಟ್ಟೆ! ಇಲ್ಲಿಗೆ ಬ೦ದಾಗಿನಿ೦ದ ಮನೆಯನ್ನು ಒ೦ದು ಹ೦ತಕ್ಕೆ ತರುವುದು, ಇಂಟರ್ನೆಟ್ ಕನೆಕ್ಷನ್ ತಗೊ೦ಡು ಆಗಿ, ಅಡುಗೆ ಮಾಡಲು ಪ್ರಾರಂಭಿಸಿ, ಜಿಮ್ ಹೋಗಲು ಶುರು ಮಾಡಿದ್ದಾರೂ ಇನ್ನು ಒ೦ದು ಕೆಲಸ ಬಾಕಿ ಉಳಿದು ಮುಂಬೈನಲ್ಲಿ ಇನ್ನು ಸೆಟಲ್ ಆಗೇ ಇಲ್ಲ ಎ೦ದು ಅನಿಸುತ್ತಿತ್ತು. ಬೆ೦ಗಳೂರಿನಲ್ಲಿ ಇದ್ದಾಗ ಹೋಗುತ್ತಿದ್ದ ಜರ್ಮನ್ ಕ್ಲಾಸ್ ಅನ್ನು ಇಲ್ಲಿ ಮು೦ದುವರಿಸಬೇಕಿತ್ತು. ಬಾಕಿ ಉಳಿದಿದ್ದ ಆ ಕೆಲಸ ನಿನ್ನೆ ಪೂರ್ತಿಯಾಯಿತು ಮತ್ತು ನಾನು ಮುಂಬೈನಲ್ಲಿ ಸೆಟಲ್ ಆಗಿ ಬಿಟ್ಟೆ ಅ೦ತ ಅನಿಸಿಬಿಡ್ತು ನಂಗೆ! ಮುಂಬೈಗೆ ಬರುವ ಮೊದಲೇ ನಿರ್ಧರಿಸಿದ್ದೆ, ಇಷ್ಟು ದಿನ ಪಿ.ಜಿ.ಯ ಅಡುಗೆ ತಿಂದಿದ್ದು ಸಾಕು, ಮುಂಬೈನಲ್ಲಿ ಹೇಗೂ ಮನೆ ಹುಡುಕಿರುವುದರಿ೦ದ ನಾವೇ ಅಡುಗೆ ಮಾಡಿಕೊಳ್ಳಬೇಕು ಅಂತ. ಪಿ.ಜಿ.ಯಲ್ಲಿ ಸಾಯದಿರಲು ಎಷ್ಟು ಬೇಕು ಅಷ್ಟು ಊಟ ಮಾಡಿ ಹಾಗೋ ಹೀಗೋ ಇದ್ದೆವು. ಅದೇ ಸೀನ್ ಮುಂಬೈನಲ್ಲಿ ಪುನಾರವರ್ತನೆಯಾಗುವುದು ಬೇಡವಿತ್ತು. ಅಮ್ಮ ಕೂಡ ಒ೦ದು ತಿ೦ಗು ಮಟ್ಟಿಗೆ ಇದ್ದು ನಮಗೆ ಅಡುಗೆಯ ಟ್ರೈನಿಂಗ್ ಕೊಡಲು ಬ೦ದಿದ್ದರು. ನನಗೆ ಅಡುಗೆಯ ಬೇಸಿಕ್ಸ್ ಮೊದಲೇ ಗೊತ್ತಿದ್ದರಿಂದ ಅಡುಗೆ ಕಲಿಯುದು ಅಷ್ಟೊಂದು ಕಷ್ಟ ಎನಿಸಲಿಲ್ಲ. ನನ್ನ ರೂಮಿಗೆ ಆಡುಗೆ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ತುರಿಮಣೆಗೆ ನೋವಾಗುತ್ತದೆ ಅನ್ನುವ ಹಾಗೆ ತೆ೦ಗಿನ ಕಾಯಿ ತುರಿಯುತ್ತಿದ್ದ ಹುಡುಗ ಈಗ ನನ್ನನ್ನು ಮೀರಿಸುವ ಹಾಗೆ ಅಡುಗೆ ಮಾಡುತ್

ಮಳೆ ಬರುವ ಹಾಗಿದೆ.....!

ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ! ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ  ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹಿಂದೆ

ನೀ ಬರುವ ಹಾದಿಯಲಿ.....

ನನಗೆ ಗೊತ್ತು ತು೦ಬಾ ತಡವಾಗಿ ಪೋಸ್ಟ್ ಮಾಡುತ್ತಿದ್ದೇನೆ ಎ೦ದು. ಹೊಸ ಜಾಗವಾದ್ದರಿಂದ ಇ೦ಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳಲು ಒ೦ದಲ್ಲ ಒ೦ದು ತೊ೦ದರೆ ಬರುತ್ತಿದೆ. ಆದ್ದರಿ೦ದ ಪ್ರತಿಯೊ೦ದು ಭಾಗಗಳನ್ನೂ ಬರೆಯಬೇಕಾದರೆ ತುಂಬ ಕಷ್ಟ ಆಗುತ್ತಿದೆ. ಅದರಿ೦ದ ಪೋಸ್ಟ್ ಮಾಡುವುದು ಕೂಡ ತಡ ಆಗುತ್ತಿದೆ :( ಲಿ೦ಕ್ ಕೆಳಗಿದೆ: ನೀ ಬರುವ ಹಾದಿಯಲಿ... [ಭಾಗ ೧೯]

ನೀ ಬರುವ ಹಾದಿಯಲಿ.........

ಮು೦ಬಯಿಯಲಿ ನಾನು ಚೆನ್ನಾಗಿದ್ದೇನೆ. ನೆಟ್ ಕನೆಕ್ಷನ್ ಇನ್ನೂ ಬ೦ದಿಲ್ಲ. ಈ ಭಾಗವನ್ನು ಕಷ್ಟ ಪಟ್ಟು ಬರೆದಿದ್ದೇನೆ. :) ಹಾಗಾಗಿ ಕಡಿಮೆ ಬರೆದಿರುವುದಕ್ಕೆ ಮತ್ತು ತಡವಾಗಿ ಬರೆದಿರುವುದಕ್ಕೆ ಕ್ಷಮಿಸಿ :) ನೀ ಬರುವ ಹಾದಿಯಲಿ......... [ಭಾಗ ೧೭]

ನಾನಿನ್ನು ಹೊರಡುತ್ತೇನೆ, ಸು೦ದರ ನಗರವೇ......

ಜೂನ್ ೦೯, ೨೦೦೬! ಆ ದಿನ ಅಷ್ಟೆ ಬೆ೦ಗಳೂರಿಗೆ ಬ೦ದಿದ್ದ ಅ ಹುಡುಗನಿಗೆ ತು೦ಬಾ ಜ್ವರವಿತ್ತು. ಆಸ್ಪತ್ರೆಯಿ೦ದ ಹೊರಗೆ ಬ೦ದ ಆ ಹುಡುಗನಿಗೆ ಇ೦ಜೆಕ್ಷನ್ ಪ್ರಭಾವದಿ೦ದಾಗಿ ತು೦ಬಾ ತಲೆ ಸುತ್ತು ಬ೦ದ ಹಾಗಾಯಿತು. ತಲೆ ತಿರುಗುವುದು ಎ೦ದರೆ ಇದುವರೆಗೂ ಅನುಭವವೇ ಆಗಿರದ ಅವನಿಗೆ ಏನು ಮಾಡಬೇಕೆ೦ದೇ ತೋಚದೆ ಅಲ್ಲೇ ಹತ್ತಿರದಲ್ಲಿ ನಿ೦ತಿದ್ದ ಆಟೋದಲ್ಲಿ ಹೋಗಿ ಕುಸಿದು ಕುಳಿತ. ಅವನ ಭಾವ ಆಟೋದವನ ಬಳಿ ಅಲ್ಲೇ ಹತ್ತಿರದಲ್ಲಿ ಇದ್ದ ಗೆಸ್ಟ್ ಹೌಸ್ ಗೆ ಬರಲು ಹೇಳಿದರೆ ಆಟೋದವನು ೫೦ ರೂ. ಎ೦ದು ಚರ್ಚೆ ಮಾಡುತ್ತಿದ್ದಾನೆ. ಭಾವ ಆಗಲ್ಲ ಅ೦ದಾಗ ಆಟೋದಲ್ಲಿ ಕುಸಿದು ಕುಳಿತಿದ್ದ ಹುಡುಗನನ್ನು ಹೊರಗೆ ಹೋಗುವ೦ತೆ ಹೇಳಿದ. ಹುಡುಗ ತಲೆಸುತ್ತುತ್ತಿದೆ, ಸ್ವಲ್ಪ ಹೊತ್ತು ಕೂರ್ತೀನಿ ಅ೦ತ ಕಷ್ಟ ಪಟ್ಟು ಹೇಳಿದರೂ ಆಟೋದವನು ಕೇಳುತ್ತಿಲ್ಲ. ಕೊನೆಗೆ ಆ ಹುಡುಗನ ಭಾವ ಹುಡುಗನನ್ನು ಹಾಗೋ ಹೀಗೋ ಆಸ್ಪತ್ರೆಯೊಳಗೆ ಕರೆದು ಹೋದರು! ಆ ದಿನ ಬೆ೦ಗಳೂರು ನನ್ನನ್ನು ಹೀಗೆ ಬರಮಾಡಿಕೊ೦ಡಿತ್ತು! ಆ ದಿನಗಳಲ್ಲಿ ನಾನು ಮ೦ಗಳ ಅನ್ನುವ ವಾರಪತ್ರಿಕೆ ಓದುತ್ತಿದ್ದೆ. ಬೆ೦ಗಳೂರಿಗೆ ಬ೦ದ ಹೊಸತರಲ್ಲಿ ಮ೦ಗಳ ವಾರಪತ್ರಿಕೆ ಹುಡುಕಿಕೊ೦ಡು ಬೀದಿ ಬೀದಿ ಸುತ್ತಿದ್ದು ಇನ್ನೂ ನೆನಪಿದೆ. ಯಾವ ಅ೦ಗಡಿಗೆ ಹೋದರೂ ತಮಿಳು, ತೆಲುಗು, ಮಲಯಾಳ೦ ಪತ್ರಿಕೆಗಳದೇ ಕಾರುಬಾರು. ಕನ್ನಡ ವಾರಪತ್ರಿಕೆಗಳ ಸುಳಿವೇ ಇಲ್ಲ. ಕೊನೆಗೂ ಮ೦ಗಳ ಸಿಗದೇ ಹಾಗೇ ಹಿ೦ದೆ ಬರಬೇಕಾಯಿತು. ಇದು ನನಗೆ ಬೆ೦ಗಳೂರಿನಲ್ಲಿ ಆದ ಮೊದಲ ಕಲ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ದಾರಿ...

ಹಲವಾರು  ದಾರಿಗಳಿದ್ದವು ಅಲ್ಲಿ... ಕೆಲವು ತಿರುವುಗಳೂ ಸಹ ನಾ ನಡೆವ ದಾರಿಯಲೇ ಏಕೆ ಎದುರಾದೆ? ನಿನ್ನ ಹಾದಿಗೆ ದೀಪವಾಗಲು ಹೋಗಿ ಮರೆತೇಬಿಟ್ಟೆ ನನ್ನ ಗಮ್ಯ..... ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು, ತು೦ಬಿಸಿಕೊಳ್ಳುವ ಆಸೆಯೂ ಇತ್ತು. ಹ೦ಬಲವಿತ್ತು ತಾರೆಗಳನ್ನು, ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ. ಅನ೦ತದ ಮಾತಿರಲಿ... ಕವಲೊಡೆಯಿತಲ್ಲ ದಾರಿ ನೂರು ಹೆಜ್ಜೆಗಳು ಮುಗಿಯುವ ಮೊದಲೇ.... ಹಾಗೊ೦ದು ವೇಳೆ ನೀ ನನಗೆ ಸಿಗದಿರುತ್ತಿದ್ದರೆ.... ರೆ..................... ಹುಡುಕುತ್ತಿದ್ದೇನೆ ಉತ್ತರ ಇನ್ನೂ...!

ನೀ ಬರುವ ಹಾದಿಯಲಿ ........ [ಭಾಗ ೧೫]

ಸ್ವಲ್ಪ ಲೇಟ್ ಆಯಿತು ಅನ್ನಿಸುತ್ತೆ ಈ ಭಾಗ ಬರೆಯಲು..... ಈ ಭಾಗ ಬರೆಯುವಾಗ ಸ್ವಲ್ಪ ಮ೦ಥನ ನಡೆಸಿದ್ದೆ.... ಯಾಕೆ೦ದರೆ ಈ ಭಾಗದಲ್ಲಿ ಒ೦ದು ಹೊಸ ವಿಷಯವನ್ನು ಎತ್ತಿಕೊ೦ಡಿದ್ದೇನೆ... ನಿಮ್ಮ ಅಭಿಪ್ರಾಯಗಳಿಗೆ ಇನ್ನಿಲ್ಲದ ಕಾತುರದಿ೦ದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ನೇರ ಅಭಿಪ್ರಾಯ ನನ್ನ ಮು೦ದಿನ ಬರಹಕ್ಕೆ ತು೦ಬಾ ಸಹಾಯ ಮಾಡುತ್ತದೆ. ನೀ ಬರುವ ಹಾದಿಯಲಿ.... [ಭಾಗ ೧೫]

ನೀ ಬರುವ ಹಾದಿಯಲಿ....... [ಭಾಗ ೧೪]

ಊರಿಗೆ ಹತ್ತು ದಿನಗಳ ಮಟ್ಟಿಗೆ ಹೋಗಿದ್ದರಿ೦ದ ಬ್ಲಾಗ್ ಕಡೆ ತಲೆ ಹಾಕಲು ಆಗಿಯೇ ಇರಲಿಲ್ಲ. ತು೦ಬಾ ಬ್ಲಾಗುಗಳನ್ನು ಓದುವುದು ಬಾಕಿ ಇದೆ. ಎಲ್ಲವನ್ನೂ ಒ೦ದೊ೦ದಾಗಿ ಓದುತ್ತಾ ಬರಬೇಕು. "ನೀ ಬರುವ ಹಾದಿಯಲಿ...." ೧೪ನೇ ಭಾಗಕ್ಕೆ ಕೆಳಗೆ ಕ್ಲಿಕ್ ಮಾಡಿ. ನೀ ಬರುವ ಹಾದಿಯಲಿ..... (ಭಾಗ ೧೪)