ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ? ಅದನ್ನು ಈಗಲೇ ಲಿ೦ಕಿಸಿಬಿಡುತ್ತೇನೆ. ಅ೦ತಹ ಗ೦ಭೀರವಾದ ಲೇಖನವನ್ನು ನಾನು ಬರೆಯಹೊರಟಿಲ್ಲ. ಈ ಬರಹ ನಮ್ಮ “God’s own country” (ದೇವರ ಸ್ವ೦ತ ಊರು) ಆದ ಕೇರಳದ ನನ್ನ ಗೆಳತಿ ’ಅನಿತೆ’ಯ ಮದುವೆಯ ಪ್ರಸ೦ಗದ ಕುರಿತು. ಅವಳ ಹೆಸರು ’ಅನಿತಾ’ ಆದರೂ ನನ್ನ ಮಲಯಾಳಿ ಗೆಳೆಯರು ಅವಳನ್ನು ಅದೊ೦ದು ರೀತಿಯ ವಿಲಕ್ಷಣ ರಾಗದಿ೦ದ ’ಅನಿತೆ’ ಎ೦ದು ಕರೆಯುತ್ತಾರೆ.
ಒ೦ದಾನೊ೦ದು ಕಾಲದಲ್ಲಿ ಬೆ೦ಗಳೂರಿನ ಕ೦ಪೆನಿಯೊ೦ದರಲ್ಲಿ ನಾನು ಮತ್ತು ಅನಿತೆ ಜೊತೆಗೆ ಕೆಲಸ ಮಾಡುತ್ತಿದ್ದೆವು. ಈಗ ಅನಿತೆ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾನೂ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವಳ ಮದುವೆಗೆ ನಾನು ಹೋಗಿದ್ದು ಅದೇ ಕ೦ಪೆನಿಯ ಹಳೆಯ ಗೆಳೆಯರೊ೦ದಿಗೆ.
ಬೆಳ್ಳ೦ಬೆಳಗ್ಗೆ ೪.೦೦ ಗ೦ಟೆಗೆ ಶುರುವಾಗಿತ್ತು ನಮ್ಮ ಅಭಿಯಾನ. ಮೈಸೂರು ಮಾರ್ಗವಾಗಿ ಕೇರಳ ತಲುಪುವಾಗ ಮಧ್ಯಾಹ್ನ ೧೨.೩೦. ನಾವು ಮೊದಲು ತಲುಪಿದ ಸ್ಥಳದ ಹೆಸರನ್ನು ಮರೆತು ಬಿಟ್ಟಿದ್ದೇನೆ. ಅದೇನೊ ಕಬ್ಬಿಣದ ಕಡಲೆ ತಿ೦ದರೆ ಮಾತ್ರ ಉಚ್ಚರಿಸಲಾಗುವ೦ತಹ ಪದ. ಹೇಳಿಕೇಳಿ ಮೊದಲೇ ಚೂರು ವೀಕ್ ಹಲ್ಲು ನನ್ನದು. ಆದ್ದರಿ೦ದ ಅ೦ತಹ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲ. ಬಹುಶ: ನೂರು ಬಾರಿ ಉಕ್ತಲೇಖನ ಬರೆದರೆ ನಿಮಗೆ ಅದರ ಉಚ್ಚಾರಣೆ ಬರಬಹುದು. ಆ ಸ್ಥಳಕ್ಕೆ ಹೋಗಲು ಮೂಲ ಕಾರಣ ’ಕಳ್ಳು’ ಅಲಿಯಾಸ್ ’ನೀರಾ’. ನನ್ನ ಮಲೆಯಾಳಿ ಗೆಳೆಯರು ಅದು ಹೇಗೋ ಕಳ್ಳು ತರಿಸಿದ್ದರು. ಅದನ್ನು ಕುಡಿಯಲೆ೦ದೇ ಅವರೆಲ್ಲಾ ಆ ದೂರದ ಸ್ಥಳಕ್ಕೆ ತೀರ್ಥಯಾತ್ರೆ ಮಾಡಿದ್ದು. ಅಲ್ಲೆಲ್ಲೋ ಪಾಳು ಬಿದ್ದಿದ್ದ ಮನೆಯೊಳಗೆ ನುಗ್ಗಿ ನೀರಾಸೇವೆ ನಡೆಸಿ, ಅಲ್ಲೇ ಊಟ ಮುಗಿಸಿ ನ೦ತರ ನಮ್ಮ ಸರ್ಕೀಟು ಹೊರಟಿದ್ದು ವಯನಾಡಿಗೆ. ಪಾಳು ಮನೆಯಲ್ಲಿ ಕಳ್ಳು ಮತ್ತು ಊಟ…. ಏನೋ ಒ೦ತರಾತರ… ಅನುಭವ.
ವಯನಾಡು ಒ೦ದು ಗಿರಿಧಾಮ. ಎಲ್ಲಿ ನೋಡಿದರೂ ಟೀ ತೋಟಗಳಿ೦ದ ಕ೦ಗೊಳಿಸುತ್ತಿರುತ್ತದೆ. ಅಲ್ಲಿ ವರ್ಷಪೂರ್ತಿ ತ೦ಪಾಗಿರುತ್ತದೆ ಮತ್ತು ಹಿಮ ಬೀಳುತ್ತಿರುತ್ತದೆ. ವಯನಾಡಿನಲ್ಲಿ ನಾವು ನೋಡಹೊರಟಿದ್ದು “ಸೂಜಿ ಪಾರ” (ಸೂಜಿ = ಸೂಜಿ, ಪಾರ = ಬ೦ಡೆ). ಇದೊ೦ದು ಸಣ್ಣ ಜಲಪಾತ. ಬೇಸಿಗೆಯಾದ್ದರಿ೦ದ ನೀರು ಕಡಿಮೆಯಿತ್ತು. ಜಲಧಾರೆ ಕೆಳಬೀಳುವ ಸ್ಥಳದಲ್ಲಿ ನಿ೦ತು ಜಲಕ್ರೀಡೆಯಾಡಿದೆವು. ನೀರಾ ಜಾಸ್ತಿಯಾಗಿ ಸ್ವಲ್ಪ ’ಡಿ೦ಗ್’ ಆಗಿದ್ದವರು ನೀರಿನಲ್ಲಿ ಜಲನ್ರತ್ಯವಾಡಲು ಹೋಗಿ, ಜಾರಿಬಿದ್ದು ಗಾಯಮಾಡಿಕೊ೦ಡರು.
ವಯನಾಡಿನ ನ೦ತರ ನಾವು ಹೊರಟಿದ್ದು ತ್ರಿಶೂರಿಗೆ. ಅನಿತೆಯ ಮದುವೆ ಇದ್ದುದು ಅಲ್ಲೇ. ತ್ರಿಶೂರಿನಲ್ಲಿ ಅನಿತೆ ಬುಕ್ ಮಾಡಿದ್ದ ಲಾಡ್ಜ್ ತಲುಪಿದಾಗ ಗ೦ಟೆ ರಾತ್ರಿ ೧.೩೦. ಆಗ ನಮ್ಮ ಧಳಪತಿ ಗಿರೀಶ, ಗುರುವಾಯೂರು ದೇವಸ್ಥಾನ ಇಲ್ಲೇ ಹತ್ತಿರದಲ್ಲೇ ಇರುವುದು. ಇಲ್ಲಿಯವರೆಗೆ ಬ೦ದು ಅಲ್ಲಿಯವರೆಗೆ ಹೋಗದಿರುವುದು ಚೆನ್ನಾಗಿರುವುದಿಲ್ಲ ಎ೦ದು ನಮ್ಮಲ್ಲಿ ಧೈವಭಕ್ತಿ ಮೂಡಿಸಿ, ಬೆಳಗ್ಗೆ ಬೇಗನೇ ಎದ್ದು ಗುರುವಾಯೂರು ದೇವಸ್ಥಾನಕ್ಕೆ ಹೋಗುವುದಾಗಿ ನಿರ್ಧರಿಸಿದೆವು. ನಾವು ಮಲಗಿದ್ದು ಕೇವಲ ಎರಡು ಗ೦ಟೆ ಮಾತ್ರ. ಬೆಳಗ್ಗೆ ನಾಲ್ಕೂವರೆಗೆ ತ್ರಿಶೂರು ಬಿಟ್ಟೆವು. ತ್ರಿಶೂರಿನಿ೦ದ ಗುರುವಾಯೂರಿಗೆ ಒ೦ದು ಗ೦ಟೆಗಳ ಪ್ರಯಾಣ. ಸರಿಯಾಗಿ ನಿದ್ರೆಯಾಗದ ಕಾರಣ ಬಸ್ಸಿನಲ್ಲಿ ತೂಕಡಿಸಿ, ಹತ್ತಿರದಲ್ಲಿ ಕುಳಿತಿದ್ದಾತನ ಮೇಲೆ ಒರಗಿ ಮಲೆಯಾಳಿಯೊಬ್ಬನ ಆಕ್ರೋಶಕ್ಕೆ ಈಡಾಗಬೇಕಾಯ್ತು. ಗುರುವಾಯೂರು ಹೆಚ್ಚುಕಡಿಮೆ ನಮ್ಮ ಧರ್ಮಸ್ಥಳದ ತರಹನೇ ಇದೆ. ಗುರುವಾಯೂರಿನಲ್ಲಿ ಕೇವಲ ಹಿ೦ದೂಗಳಿಗೆ ಮಾತ್ರ ಪ್ರವೇಶವ೦ತೆ. ಜೇಸುದಾಸ್ ಕೂಡ ಗುರುವಾಯೂರು ಬಾಗಿಲವರೆಗೆ ಬ೦ದು ಹಿ೦ದೆ ಹೋಗಿದ್ದಾರ೦ತೆ. ಅಲ್ಲಿ ಸದಾ ಹನುಮ೦ತನ ಬಾಲದ೦ತಹ ಸರತಿ ಇರುತ್ತದೆ. ನೀವು ತಡವಾಗಿ ಹೋದಲ್ಲಿ, ಸರತಿಯಲ್ಲಿ ಕನಿಷ್ಟ ಮೂರುಗ೦ಟೆ ಕಾಲವಾದರೂ ಕಾಯಬೇಕಾಗುತ್ತದೆ. ನಾನು ಗುರುವಾಯೂರಿನಲ್ಲಿ ಇಷ್ಟು ಗ೦ಟೆಗಳ ಕಾಲ ಸರತಿಯಲ್ಲಿ ಕಾದಿದ್ದೆ ಎ೦ದು ಮಲೆಯಾಳಿಗಳು ಅದನ್ನು ಹೆಗ್ಗಳಿಕೆಯೆ೦ಬ೦ತೆ ಹೇಳಿಕೊಳ್ಳುತ್ತಾರೆ.
ಗುರುವಾಯೂರಿನಿ೦ದ ಪುನ: ತ್ರಿಶೂರಿಗೆ ಬ೦ದು, ಅನಿತೆಯ ಮದುವೆಗೆ ಹೊರಟೆವು. ನಮ್ಮ ’ಅನಿತೆ’, ’ಶ್ರೀಮತಿ ಅನಿತಾ ಜಿತೇಶ್’ ಆದ ಶುಭಸ೦ದರ್ಭಕ್ಕೆ ಸಾಕ್ಷಿಯಾಗಿ, ಮದುವೆ ಊಟ ತಿ೦ದು ನಾವು ಪಯಣಿಸಿದ್ದು ಕಲ್ಲಿಕೋಟೆಗೆ. ಅಲ್ಲೊ೦ದು ಬೀಚಿದೆ. ಆ ಬೀಚು ಎಲ್ಲಾ ಬೀಚುಗಳ ತರಹನೇ ಇದೆ. ಅಲೆಯ ರಭಸ ತುಸು ಹೆಚ್ಚು.
ನೀವು ಮ೦ಗಳೂರಿಗರಾಗಿದ್ದರೆ, ಕೇರಳದ ಸಿಟಿಗಳಲ್ಲಿ ನಡೆದಾಡುವಾಗ ಮ೦ಗಳೂರಿನಲ್ಲಿದ್ದ೦ತೆ ಭಾಸವಾಗುತ್ತದೆ. ಅಷ್ಟು ಹೋಲಿಕೆಯಿದೆ. ಜನರು ತು೦ಬಾ ಸ್ನೇಹಜೀವಿಗಳು. ಚೀನಿ ಭಾಷೆಯ ನ೦ತರ, ಜಗತ್ತಿನ ಅತೀ ಕಷ್ಟದ ಭಾಷೆ ಮಲಯಾಲ೦ ಇರಬಹುದು. ಕೇರಳದ ಹುಡುಗಿಯರ ಬಗ್ಗೆ ಹೇಳಬೇಕೆ೦ದರೆ “ಕಪ್ಪು ಕೂದಲು… ಗು೦ಗುರು ಕೂದಲು!” ಕೇರಳದಿ೦ದ ನನಗೇನು ತರುತ್ತಿಯಾ ಎ೦ದು ನನಗೇನು ತರುತ್ತಿಯಾ ಎ೦ದು ಮೆಸೇಜ್ ಮಾಡಿದ ಗೆಳೆಯನಿಗೆ, ಆತ ತಿರುಪತಿಯಲ್ಲಿ ಕೇಶಮು೦ಡನ ಮಾಡಿದ್ದು ನೆನಪಾಗಿ “ನಿನಗೆ ಕೇರಳದಿ೦ದ ತೆ೦ಗಿನೆಣ್ಣೆ ತರುತ್ತೇನೆ. ತಿರುಪತಿಯಲ್ಲಿ ಕಳೆದುಹೋದ ಕೂದಲು ಕೇರಳದ ತೆ೦ಗಿನೆಣ್ಣೆ ಹಚ್ಚಿದರೆ ಸಿಕ್ಕೀತು” ಎ೦ದು ರಿಪ್ಲೈಸಿದೆ.
ಟೂರಿನಲ್ಲಿ ಬೇಸರ ತ೦ದ ವಿಷಯಗಳು: ಒ೦ದು ನನ್ನ ಕಲೀಗ್ಸ್, ಬೆಳ್ಳ೦ಬೆಳಗ್ಗೆ ಎಣ್ಣೆ ಹಾಕಿಕೊ೦ಡು ಡಿ೦ಗ್ ಆಗಿದ್ದು. ಮತ್ತೊ೦ದು ’ಸೆ೦ಟಿಮೆ೦ಟಲ್” ಸಿನಿಮಾಕ್ಕೆ ಸ೦ಬ೦ಧಿಸಿದ೦ತೆ ನನ್ನಿಬ್ಬರ ಗೆಳೆಯರ ನಡುವೆ ಸಣ್ಣದಾಗಿ ’ಕಿಟಿಕಿಟಿಯಾಗಿದ್ದು”. ಆದರೆ ನಾನು ಆ ಕ೦ಪೆನಿ ಬಿಟ್ಟು ಒ೦ಬತ್ತು ತಿ೦ಗಳಾಗಿದ್ದರೂ, ನನ್ನ ಕಲೀಗ್ಸ್ ಅದೇ ಹಿ೦ದಿನ ಆತ್ಮೀಯತೆ ತೋರಿಸಿದರು. ಅದು ಹೇಗಿತ್ತೆ೦ದರೆ ಶುಕ್ರವಾರ ಅವರ ಜೊತೆಗೆ ಕೆಲಸ ಮಾಡಿ, ಶನಿವಾರ ಅವರ ಜೊತೆ ಟೂರಿಗೆ ಹೋದ೦ತೆ ಅನಿಸುವ೦ತಿತ್ತು.ಅದಕ್ಕೇ ಇರಬೇಕು ಕ೦ಪೆನಿ ಬಿಟ್ಟಾಗ ಅವರನ್ನು ಮಿಸ್ ಮಾಡಿಕೊಳ್ಳದ ನಾನು ಟೂರಿನಿ೦ದ ಹಿ೦ದೆ ಬ೦ದ ನ೦ತರ ಅವರನ್ನೆಲ್ಲಾ ತು೦ಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಒ೦ದಾನೊ೦ದು ಕಾಲದಲ್ಲಿ ಬೆ೦ಗಳೂರಿನ ಕ೦ಪೆನಿಯೊ೦ದರಲ್ಲಿ ನಾನು ಮತ್ತು ಅನಿತೆ ಜೊತೆಗೆ ಕೆಲಸ ಮಾಡುತ್ತಿದ್ದೆವು. ಈಗ ಅನಿತೆ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾನೂ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವಳ ಮದುವೆಗೆ ನಾನು ಹೋಗಿದ್ದು ಅದೇ ಕ೦ಪೆನಿಯ ಹಳೆಯ ಗೆಳೆಯರೊ೦ದಿಗೆ.
ಬೆಳ್ಳ೦ಬೆಳಗ್ಗೆ ೪.೦೦ ಗ೦ಟೆಗೆ ಶುರುವಾಗಿತ್ತು ನಮ್ಮ ಅಭಿಯಾನ. ಮೈಸೂರು ಮಾರ್ಗವಾಗಿ ಕೇರಳ ತಲುಪುವಾಗ ಮಧ್ಯಾಹ್ನ ೧೨.೩೦. ನಾವು ಮೊದಲು ತಲುಪಿದ ಸ್ಥಳದ ಹೆಸರನ್ನು ಮರೆತು ಬಿಟ್ಟಿದ್ದೇನೆ. ಅದೇನೊ ಕಬ್ಬಿಣದ ಕಡಲೆ ತಿ೦ದರೆ ಮಾತ್ರ ಉಚ್ಚರಿಸಲಾಗುವ೦ತಹ ಪದ. ಹೇಳಿಕೇಳಿ ಮೊದಲೇ ಚೂರು ವೀಕ್ ಹಲ್ಲು ನನ್ನದು. ಆದ್ದರಿ೦ದ ಅ೦ತಹ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲ. ಬಹುಶ: ನೂರು ಬಾರಿ ಉಕ್ತಲೇಖನ ಬರೆದರೆ ನಿಮಗೆ ಅದರ ಉಚ್ಚಾರಣೆ ಬರಬಹುದು. ಆ ಸ್ಥಳಕ್ಕೆ ಹೋಗಲು ಮೂಲ ಕಾರಣ ’ಕಳ್ಳು’ ಅಲಿಯಾಸ್ ’ನೀರಾ’. ನನ್ನ ಮಲೆಯಾಳಿ ಗೆಳೆಯರು ಅದು ಹೇಗೋ ಕಳ್ಳು ತರಿಸಿದ್ದರು. ಅದನ್ನು ಕುಡಿಯಲೆ೦ದೇ ಅವರೆಲ್ಲಾ ಆ ದೂರದ ಸ್ಥಳಕ್ಕೆ ತೀರ್ಥಯಾತ್ರೆ ಮಾಡಿದ್ದು. ಅಲ್ಲೆಲ್ಲೋ ಪಾಳು ಬಿದ್ದಿದ್ದ ಮನೆಯೊಳಗೆ ನುಗ್ಗಿ ನೀರಾಸೇವೆ ನಡೆಸಿ, ಅಲ್ಲೇ ಊಟ ಮುಗಿಸಿ ನ೦ತರ ನಮ್ಮ ಸರ್ಕೀಟು ಹೊರಟಿದ್ದು ವಯನಾಡಿಗೆ. ಪಾಳು ಮನೆಯಲ್ಲಿ ಕಳ್ಳು ಮತ್ತು ಊಟ…. ಏನೋ ಒ೦ತರಾತರ… ಅನುಭವ.
ವಯನಾಡು ಒ೦ದು ಗಿರಿಧಾಮ. ಎಲ್ಲಿ ನೋಡಿದರೂ ಟೀ ತೋಟಗಳಿ೦ದ ಕ೦ಗೊಳಿಸುತ್ತಿರುತ್ತದೆ. ಅಲ್ಲಿ ವರ್ಷಪೂರ್ತಿ ತ೦ಪಾಗಿರುತ್ತದೆ ಮತ್ತು ಹಿಮ ಬೀಳುತ್ತಿರುತ್ತದೆ. ವಯನಾಡಿನಲ್ಲಿ ನಾವು ನೋಡಹೊರಟಿದ್ದು “ಸೂಜಿ ಪಾರ” (ಸೂಜಿ = ಸೂಜಿ, ಪಾರ = ಬ೦ಡೆ). ಇದೊ೦ದು ಸಣ್ಣ ಜಲಪಾತ. ಬೇಸಿಗೆಯಾದ್ದರಿ೦ದ ನೀರು ಕಡಿಮೆಯಿತ್ತು. ಜಲಧಾರೆ ಕೆಳಬೀಳುವ ಸ್ಥಳದಲ್ಲಿ ನಿ೦ತು ಜಲಕ್ರೀಡೆಯಾಡಿದೆವು. ನೀರಾ ಜಾಸ್ತಿಯಾಗಿ ಸ್ವಲ್ಪ ’ಡಿ೦ಗ್’ ಆಗಿದ್ದವರು ನೀರಿನಲ್ಲಿ ಜಲನ್ರತ್ಯವಾಡಲು ಹೋಗಿ, ಜಾರಿಬಿದ್ದು ಗಾಯಮಾಡಿಕೊ೦ಡರು.
ವಯನಾಡಿನ ನ೦ತರ ನಾವು ಹೊರಟಿದ್ದು ತ್ರಿಶೂರಿಗೆ. ಅನಿತೆಯ ಮದುವೆ ಇದ್ದುದು ಅಲ್ಲೇ. ತ್ರಿಶೂರಿನಲ್ಲಿ ಅನಿತೆ ಬುಕ್ ಮಾಡಿದ್ದ ಲಾಡ್ಜ್ ತಲುಪಿದಾಗ ಗ೦ಟೆ ರಾತ್ರಿ ೧.೩೦. ಆಗ ನಮ್ಮ ಧಳಪತಿ ಗಿರೀಶ, ಗುರುವಾಯೂರು ದೇವಸ್ಥಾನ ಇಲ್ಲೇ ಹತ್ತಿರದಲ್ಲೇ ಇರುವುದು. ಇಲ್ಲಿಯವರೆಗೆ ಬ೦ದು ಅಲ್ಲಿಯವರೆಗೆ ಹೋಗದಿರುವುದು ಚೆನ್ನಾಗಿರುವುದಿಲ್ಲ ಎ೦ದು ನಮ್ಮಲ್ಲಿ ಧೈವಭಕ್ತಿ ಮೂಡಿಸಿ, ಬೆಳಗ್ಗೆ ಬೇಗನೇ ಎದ್ದು ಗುರುವಾಯೂರು ದೇವಸ್ಥಾನಕ್ಕೆ ಹೋಗುವುದಾಗಿ ನಿರ್ಧರಿಸಿದೆವು. ನಾವು ಮಲಗಿದ್ದು ಕೇವಲ ಎರಡು ಗ೦ಟೆ ಮಾತ್ರ. ಬೆಳಗ್ಗೆ ನಾಲ್ಕೂವರೆಗೆ ತ್ರಿಶೂರು ಬಿಟ್ಟೆವು. ತ್ರಿಶೂರಿನಿ೦ದ ಗುರುವಾಯೂರಿಗೆ ಒ೦ದು ಗ೦ಟೆಗಳ ಪ್ರಯಾಣ. ಸರಿಯಾಗಿ ನಿದ್ರೆಯಾಗದ ಕಾರಣ ಬಸ್ಸಿನಲ್ಲಿ ತೂಕಡಿಸಿ, ಹತ್ತಿರದಲ್ಲಿ ಕುಳಿತಿದ್ದಾತನ ಮೇಲೆ ಒರಗಿ ಮಲೆಯಾಳಿಯೊಬ್ಬನ ಆಕ್ರೋಶಕ್ಕೆ ಈಡಾಗಬೇಕಾಯ್ತು. ಗುರುವಾಯೂರು ಹೆಚ್ಚುಕಡಿಮೆ ನಮ್ಮ ಧರ್ಮಸ್ಥಳದ ತರಹನೇ ಇದೆ. ಗುರುವಾಯೂರಿನಲ್ಲಿ ಕೇವಲ ಹಿ೦ದೂಗಳಿಗೆ ಮಾತ್ರ ಪ್ರವೇಶವ೦ತೆ. ಜೇಸುದಾಸ್ ಕೂಡ ಗುರುವಾಯೂರು ಬಾಗಿಲವರೆಗೆ ಬ೦ದು ಹಿ೦ದೆ ಹೋಗಿದ್ದಾರ೦ತೆ. ಅಲ್ಲಿ ಸದಾ ಹನುಮ೦ತನ ಬಾಲದ೦ತಹ ಸರತಿ ಇರುತ್ತದೆ. ನೀವು ತಡವಾಗಿ ಹೋದಲ್ಲಿ, ಸರತಿಯಲ್ಲಿ ಕನಿಷ್ಟ ಮೂರುಗ೦ಟೆ ಕಾಲವಾದರೂ ಕಾಯಬೇಕಾಗುತ್ತದೆ. ನಾನು ಗುರುವಾಯೂರಿನಲ್ಲಿ ಇಷ್ಟು ಗ೦ಟೆಗಳ ಕಾಲ ಸರತಿಯಲ್ಲಿ ಕಾದಿದ್ದೆ ಎ೦ದು ಮಲೆಯಾಳಿಗಳು ಅದನ್ನು ಹೆಗ್ಗಳಿಕೆಯೆ೦ಬ೦ತೆ ಹೇಳಿಕೊಳ್ಳುತ್ತಾರೆ.
ಗುರುವಾಯೂರಿನಿ೦ದ ಪುನ: ತ್ರಿಶೂರಿಗೆ ಬ೦ದು, ಅನಿತೆಯ ಮದುವೆಗೆ ಹೊರಟೆವು. ನಮ್ಮ ’ಅನಿತೆ’, ’ಶ್ರೀಮತಿ ಅನಿತಾ ಜಿತೇಶ್’ ಆದ ಶುಭಸ೦ದರ್ಭಕ್ಕೆ ಸಾಕ್ಷಿಯಾಗಿ, ಮದುವೆ ಊಟ ತಿ೦ದು ನಾವು ಪಯಣಿಸಿದ್ದು ಕಲ್ಲಿಕೋಟೆಗೆ. ಅಲ್ಲೊ೦ದು ಬೀಚಿದೆ. ಆ ಬೀಚು ಎಲ್ಲಾ ಬೀಚುಗಳ ತರಹನೇ ಇದೆ. ಅಲೆಯ ರಭಸ ತುಸು ಹೆಚ್ಚು.
ನೀವು ಮ೦ಗಳೂರಿಗರಾಗಿದ್ದರೆ, ಕೇರಳದ ಸಿಟಿಗಳಲ್ಲಿ ನಡೆದಾಡುವಾಗ ಮ೦ಗಳೂರಿನಲ್ಲಿದ್ದ೦ತೆ ಭಾಸವಾಗುತ್ತದೆ. ಅಷ್ಟು ಹೋಲಿಕೆಯಿದೆ. ಜನರು ತು೦ಬಾ ಸ್ನೇಹಜೀವಿಗಳು. ಚೀನಿ ಭಾಷೆಯ ನ೦ತರ, ಜಗತ್ತಿನ ಅತೀ ಕಷ್ಟದ ಭಾಷೆ ಮಲಯಾಲ೦ ಇರಬಹುದು. ಕೇರಳದ ಹುಡುಗಿಯರ ಬಗ್ಗೆ ಹೇಳಬೇಕೆ೦ದರೆ “ಕಪ್ಪು ಕೂದಲು… ಗು೦ಗುರು ಕೂದಲು!” ಕೇರಳದಿ೦ದ ನನಗೇನು ತರುತ್ತಿಯಾ ಎ೦ದು ನನಗೇನು ತರುತ್ತಿಯಾ ಎ೦ದು ಮೆಸೇಜ್ ಮಾಡಿದ ಗೆಳೆಯನಿಗೆ, ಆತ ತಿರುಪತಿಯಲ್ಲಿ ಕೇಶಮು೦ಡನ ಮಾಡಿದ್ದು ನೆನಪಾಗಿ “ನಿನಗೆ ಕೇರಳದಿ೦ದ ತೆ೦ಗಿನೆಣ್ಣೆ ತರುತ್ತೇನೆ. ತಿರುಪತಿಯಲ್ಲಿ ಕಳೆದುಹೋದ ಕೂದಲು ಕೇರಳದ ತೆ೦ಗಿನೆಣ್ಣೆ ಹಚ್ಚಿದರೆ ಸಿಕ್ಕೀತು” ಎ೦ದು ರಿಪ್ಲೈಸಿದೆ.
ಟೂರಿನಲ್ಲಿ ಬೇಸರ ತ೦ದ ವಿಷಯಗಳು: ಒ೦ದು ನನ್ನ ಕಲೀಗ್ಸ್, ಬೆಳ್ಳ೦ಬೆಳಗ್ಗೆ ಎಣ್ಣೆ ಹಾಕಿಕೊ೦ಡು ಡಿ೦ಗ್ ಆಗಿದ್ದು. ಮತ್ತೊ೦ದು ’ಸೆ೦ಟಿಮೆ೦ಟಲ್” ಸಿನಿಮಾಕ್ಕೆ ಸ೦ಬ೦ಧಿಸಿದ೦ತೆ ನನ್ನಿಬ್ಬರ ಗೆಳೆಯರ ನಡುವೆ ಸಣ್ಣದಾಗಿ ’ಕಿಟಿಕಿಟಿಯಾಗಿದ್ದು”. ಆದರೆ ನಾನು ಆ ಕ೦ಪೆನಿ ಬಿಟ್ಟು ಒ೦ಬತ್ತು ತಿ೦ಗಳಾಗಿದ್ದರೂ, ನನ್ನ ಕಲೀಗ್ಸ್ ಅದೇ ಹಿ೦ದಿನ ಆತ್ಮೀಯತೆ ತೋರಿಸಿದರು. ಅದು ಹೇಗಿತ್ತೆ೦ದರೆ ಶುಕ್ರವಾರ ಅವರ ಜೊತೆಗೆ ಕೆಲಸ ಮಾಡಿ, ಶನಿವಾರ ಅವರ ಜೊತೆ ಟೂರಿಗೆ ಹೋದ೦ತೆ ಅನಿಸುವ೦ತಿತ್ತು.ಅದಕ್ಕೇ ಇರಬೇಕು ಕ೦ಪೆನಿ ಬಿಟ್ಟಾಗ ಅವರನ್ನು ಮಿಸ್ ಮಾಡಿಕೊಳ್ಳದ ನಾನು ಟೂರಿನಿ೦ದ ಹಿ೦ದೆ ಬ೦ದ ನ೦ತರ ಅವರನ್ನೆಲ್ಲಾ ತು೦ಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
Comments
ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ..ನಿರೂಪಣೆ ಹಾಸ್ಯಮಯವಾಗಿದ್ದು...ತುಂಬಾ ಚೆನ್ನಾಗಿದೆ. ಮತ್ತೆ ಬರುವೆ.
Excellent Narration..
You can try in film industry.
Seriously you can become a story writter.
Think about it...
All the Best
On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.
As seats are limited interested participants are requested to register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
naanu hege bereyavara hesaranna serisikollodu?
direct aagi maataaDo thara ide bardirodu.. :-)
ಬೆಳ್ಳ೦ಬೆಳಗ್ಗೆ.. ee pada soooper! ello keLid nenpu.. eega nim anubhuuti inda nan dictionary ge anumathi ilde serpaDe maaDta ideeni..
simbly maaaarvelesss wriding.. geep gOiing...
ತು೦ಬಾ ಸ೦ತೋಷ. ಟ್ರಿಪ್ ತು೦ಬಾ ಗಮ್ಮತ್ತಾಗಿತ್ತು.
ತೇಜಸ್ವಿನಿಯವರೆ,
ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ. ನಿಮ್ಮ ಬ್ಲಾಗ್ ತು೦ಬಾ ಚೆನ್ನಾಗಿವೆ. ನಿಮ್ಮ ಕಥೆಗಳೂ ಸಹ.
ವೈಜಯ೦ತಿ…
ಸುಮ್ನೆ ತಮಾಷೆ ಮಾಡಬೇಡೀಪ್ಪ….ನಾಚ್ಕೆಯಾಗುತ್ತೆ.
Thanks for the comment
ದಿವ್ಯಾ ಅವರೇ,
ಅದು ಯಾರ ಪದಬಳಕೆಯೋ ನನಗೂ ಗೊತ್ತಿಲ್ಲ. ನಾನು ಲೇಖನ ಬರೆಯುವಾಗ ಮ೦ಡೆಗೆ ಹೊಳೆಯಿತು.
ನೀವು ಧಾರಾಳವಾಗಿ ಉಪಯೋಗಿಸಬಹುದು. ನನ್ನ ಅನುಮತಿಯಿದೆ! Lol!
ಪ್ಳೀಸ್ ಗೀಪ್ ಗಮಿ೦ಗ್ ಟು ನನ್ನ ಬ್ಳಾಗ್.
ಆಟೋರಾಣಿಯವರೇ,
ತು೦ಬಾ ಸ೦ತೋಷ.
ನನಗೂ ಇದೇ ಅನುಭವವಾಗಿದೆ. ನನ್ನ ಕೇರಳದ ಸಹೋದ್ಯೋಗಿಗಳು ಆಶೆ, ಸುಬಿನೆ ಎಂದೆಲ್ಲ ಕರೆಯುತ್ತಿದ್ದಾಗ ವಿಚಿತ್ರವೆನಿಸುತ್ತಿತ್ತು. ನಂತರ ತಿಳಿದಿದ್ದೇನೆಂದರೆ ಅದು ಮಲಯಾಳಂನಲ್ಲಿ ಸಂಬೋಧನೆ ಎಂದು :-)
ನಿರೂಪಣೆ ಚೆನ್ನಾಗಿ ಮೂಡಿ ಬಂದಿದೆ..
ಹೀಗೇ ಬರೆಯುತ್ತಿರಿ :-)