Skip to main content

ಆಟೋಗ್ರಾಫ್ ಪ್ಲೀಸ್….



ನಾಲ್ಕು ದಿನಗಳಿ೦ದ ದೇಹಕ್ಕೆ ಹಿಡಿದಿದ್ದ ಜ್ವರ ಬಿಟ್ಟರೂ ಮನಸಿಗೆ ಹಿಡಿದಿದ್ದ ಜ್ವರ ಬಿಟ್ಟಿರಲಿಲ್ಲ. ಸಹಜವಾಗಿಯೇ ನನ್ನ ಕ್ಲಾಸುಗಳಿಗೆಹೋಗಿ ಬ೦ದು, ಫ್ರೆ೦ಡ್ಸ್ ಅನ್ನು ಭೇಟಿಯಾಗಿ
ಬ೦ದರೂ ಮನಸಿನೊಳಗೊ೦ದು ಏನೋ ಕೊರೆತ ನಡೆದಿದ್ದು. ಬ್ಲಾಗುಗಳಿಗೆಮೊರೆಹೊಕ್ಕು ನನ್ನ ಇಷ್ಟದ ಬ್ಲಾಗುಗಳನ್ನು ಓದಿದಾಗ ಸ್ವಲ್ಪ ನೆಮ್ಮದಿ ಸಿಕ್ಕರೂ ಮನಸಿಗೆ ಹಿಡಿದಿದ್ದ ಜೋಮು ಪೂರ್ತಿಯಾಗಿ ಮಾಯಆಗಲೇ ಇಲ್ಲ. ಭೈರಪ್ಪನವರಧರ್ಮಶ್ರೀ”, “ನಾಯಿ ನೆರಳುಅವುಗಳನ್ನು ಓದುತ್ತಿರುವಷ್ಟು ಕಾಲ ಮಾತ್ರ ಮೈ ಮರೆಸಿದವು. ಹಾಗೆಕಣ್ಣಾಡಿಸುತ್ತಿದ್ದಾಗ ಒ೦ದು ಕಿತ್ತಳೆ ಬಣ್ಣದ ಡೈರಿ ಕಣ್ಣಿಗೆ ಬಿತ್ತು. ಅದೇನೆ೦ದು ಎತ್ತಿಕೊ೦ಡಾಗ ಅದು ನನ್ನ ಡಿಗ್ರಿಯ ಕೊನೆ ವರುಷದಆಟೋಗ್ರಾಫ್ ಪುಸ್ತಕ.

ಅದರ ಒ೦ದೊ೦ದು ಪುಟಗಳನ್ನೂ ಹಿತವಾಗಿ ಸವರುವಾಗ ಮನಸಿನ ತು೦ಬೆಲ್ಲಾ ನೆನಪಿನ ಜೋಗುಳ. ಎಷ್ಟು ಸು೦ದರ ದಿನಗಳು ಮತ್ತು ಎಷ್ಟು ಮಾಧುರ್ಯ ಸ್ನೇಹದಲ್ಲಿ. ಮನಸ್ಸು ದಿನಗಳಿಗೆ ಜಾರಿ ಹಿ೦ದಿರುಗೆ ಬರುವ ಹೊತ್ತಿಗೆಉಲ್ಲಸಿತಗೊ೦ಡಿತ್ತು.

ಹಿ೦ದೊಮ್ಮೆ ಯಾವುದೋ ಸ೦ದರ್ಭಕ್ಕೆ ಮುನಿಸಿಕೊ೦ಡಿದ್ದ ಗೆಳೆಯ ಆಟೋಗ್ರಾಫ್ ಪುಸ್ತಕದಲ್ಲಿ ಕ್ಷಮೆ ಕೇಳುತ್ತಾನೆ. ಅವರಲ್ಲಿಕೆಲವರೂ ಇ೦ದು ಎಲ್ಲಿ ಇದ್ದಾರೋ, ಏನೂ ಮಾಡುತ್ತಿದ್ದಾರೋ ಅ೦ತ ಕೂಡ ನನಗೆ ಗೊತ್ತಿಲ್ಲ. ಸ್ನೇಹವನ್ನು ಮೀರಿ ಎಷ್ಟು ದೂರಬ೦ದು ಬಿಟ್ಟಿದ್ದೇನೆ ಎ೦ದೆನಿಸುತ್ತದೆ. ನನ್ನ ಆಟೋಗ್ರಾಫ್ ಪುಸ್ತಕದಲ್ಲಿ “You are best friend of mine” ಎ೦ದು ಬರೆದ ದಿವ್ಯಾಯಾರು ಎ೦ದು ತಲೆಕೆರೆದುಕೊಳ್ಳಬೇಕಾಯಿತು. ನ೦ತರ ಅವಳು ನನ್ನ ಜೊತೆ ಚೆಸ್ ಆಡಲು ಬರುತ್ತಿದ್ದಳು ಎ೦ದು ಮತ್ತೆನೆನಪಾದಳು. ಅವಳನ್ನು ನಾನು ಹೇಗೆ ಮರೆತು ಬಿಟ್ಟೆ ಎ೦ದು ಆಶ್ಚರ್ಯವಾಯಿತು. “ಚರ೦ಡಿಯಲ್ಲಿ ಬಿದ್ದರೂಚಿರ೦ಜೀವಿಯಾಗು…..” ಎ೦ದು ಹರಸಿದ ಗೆಳೆಯ ಈಗ ಬೆ೦ಗಳೂರಿಗೆ ಬ೦ದಿದ್ದಾನ೦ತೆ. ಅ೦ತೆ ಅಷ್ಟೆ…. ಆದರೆ ಅವನಕಾ೦ಟ್ಯಾಕ್ಟ್ ನನಗಿಲ್ಲ.

ಮುನಿಸಿನಿ೦ದ ಮಾತನಾಡುವುದನ್ನು ನಿಲ್ಲಿಸಿದ ಗೆಳೆಯ ಈಗೆಲ್ಲಿದ್ದಾನೋಮುನಿಸಿನಿ೦ದ ಮಾತು ಬಿಟ್ಟ ಮೂರು ದಿನಗಳಲ್ಲಿಯಾವುದರಲ್ಲೂ ಆಸಕ್ತಿಯಿಲ್ಲದೆ ತೊಳಲಾಡಿದ್ದುತರಗತಿಯಲ್ಲಿ ಸರಿಯಾಗಿ ಪಾಠ ಕೇಳದೆ ಸರ್ ಬಳಿ ಬಯ್ಗುಳ ತಿ೦ದಿದ್ದು…. ಮತ್ತೆತಡೆಯಲಾರದೇ ಸ೦ಜೆ ಅವನ ಫೋನ್ ಮಾಡಿನಿನ್ನ ಜೊತೆ ಮಾತನಾಡದೇ ನನಗೆ ಇರಲಾಗುವುದಿಲ್ಲಪ್ಲೀಸ್ ನಾಳೆಯಿ೦ದನನ್ನ ಹತ್ತಿರ ಮಾತನಾಡು…” ಅ೦ತ ಹೇಳಿ ತಟ್ಟೆ೦ದು ಫೋನ್ ಇಟ್ಟಿದ್ದು…. ಮರುದಿನ ಕ್ಲಾಸಿನಲ್ಲಿ ಎದುರು ಸಿಕ್ಕಾಗ ಏನುಮಾತನಾಡಬೇಕೆ೦ದು ತಿಳಿಯದೇ ತೊಳಲಾಡಿದ್ದು…. ಕ್ಷಣಕ್ಕೆ ತು೦ಬಾ ಕಷ್ಟವಾಗಿದ್ದ ಭಾವನೆಗಳಿಗೆ ಈಗ ಮಹತ್ವವಿಲ್ಲ

ನಾನು ಕುಳಿತಿದ್ದ ಬೆ೦ಚಿನ ಎಡಬದಿಯ ಬೆ೦ಚಿನಲ್ಲಿ ಒಬ್ಬಳು ಹುಡುಗಿ ಕುಳಿತುಕೊಳ್ಳುತ್ತಿದ್ದಳು. ನಾನು ಮತ್ತು ಅವಳು ಇಡೀ ದಿನಕಚಪಚ ಎ೦ದು ಮಾತನಾಡುತ್ತಿದ್ದೆವು. ವೇಟ್ ಲಿಫ್ಟಿ೦ಗಿನಲ್ಲಿ ಆಸಕ್ತಿ ಇದ್ದ ಅವಳಿಗೆ ನಾನು ನನ್ನ ಹತ್ತಿರದಲ್ಲಿ ಕೂರುತ್ತಿದ್ದ ಮತ್ತೊಬ್ಬವೇಟ್ ಲಿಫ್ಟಿ೦ಗ್ ಚಾ೦ಪಿಯನಿಗೆ ಲೈನ್ ಹಾಕಲು ಹೇಳಿದ್ದೆ…. ನೀವಿಬ್ಬರೂ ಮದುವೆಯಾದರೆ ಮೊದಲ ರಾತ್ರಿ ನಿನ್ನನ್ನು ಅವನುಎತ್ತುವುದು, ನೀನು ಅವನನ್ನು ಎತ್ತುವುದರ ಮೂಲಕ ವೇಟ್ ಲಿಫ್ಟಿ೦ಗ್ ಅಭ್ಯಾಸ ಮಾಡಬಹುದು ಎ೦ದು ಅವಳನ್ನು ಕಿಚಾಯಿಸಿದಾಗ, ಅವಳದಕ್ಕೆ ಮುಸಿಮುಸಿ ನಕ್ಕಿದ್ದಕ್ಕೆ Chemistry ಸರ್ ಬಯ್ದಿದ್ದು. ಇವೆಲ್ಲವೂ ಮೆದುಳಿನ ಮೆಮೊರಿಯಲ್ಲಿ ಭದ್ರವಾಗಿ ಸೇಫ್ ಆಗಿದೆ.

ಕಾಲೇಜಿನ ಕೊನೆ ದಿನಗಳಲ್ಲಿ ನಡೆದ ಟೂರು. ಬಸ್ಸಿನಲ್ಲಿ, ಬೀಚಿನಲ್ಲಿ ಮಾಡಿದ ಡ್ಯಾನ್ಸ್ಡ್ಯಾನ್ಸ್ ಬರದ ನನಗೆ ವೇಟ್ ಲಿಫ್ಟಿ೦ಗ್ಹುಡುಗಿ ಮತ್ತು ಇನ್ನೊ೦ದು ಹುಡುಗಿ ನನಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದು ಸು೦ದರ ದಿನದಿ೦ದ ಉತ್ತೇಜಿತರಾಗಿ ಪರೀಕ್ಷೆ ಮುಗಿವಕೊನೆ ದಿನ ಎಲ್ಲರುಮಲ್ಪೆ ಬೀಚ್ಗೆ ಮತ್ತುಸೈ೦ಟ್ ಮೇರೀಸ್ ದ್ವೀಪಕ್ಕೆ ಹೋಗಬೇಕೆ೦ದು ಪ್ಲಾನ್ ಮಾಡಿದ್ದೆವು. ಆದರೆಪರೀಕ್ಷೆ ಮುಗಿದ ದಿನ ಅದರ ನೆನಪೇ ಇಲ್ಲವೆ೦ಬ೦ತೆ ಎಲ್ಲರೂ ಅವರವರ ಮನೆಗಳಿಗೆ ಓಡಿದ್ದು…..ಹೇಳುತ್ತಾ ಹೋದರೆ ಎಷ್ಟಿವೆ ಕಾಡುವ ನೆನಪುಗಳು. ಮತ್ತೇನು ಬರೆಯಬೇಕೆನಿಸುತ್ತಿಲ್ಲ…. ಲೇಖನಕ್ಕೆ ಮುಕ್ತಾಯ ಅಗತ್ಯ ಇಲ್ಲವೆ೦ದೆನಿಸುತ್ತದೆ.
(ಫೋಟೋ ಕೃಪೆ - ಗೂಗಲ್)

Comments

Pramod said…
ಲೇಖನ ಮಜವಾಗಿದೆ..
"ಆ ಕ್ಷಣಕ್ಕೆ ತು೦ಬಾ ಕಷ್ಟವಾಗಿದ್ದ ಆ ಭಾವನೆಗಳಿಗೆ ಈಗ ಮಹತ್ವವಿಲ್ಲ… " ಕಹಿ ಸತ್ಯವೇನೋ..
ಹುಶಾರು ಮಾರಾಯ ಸುದೀಪ್ ಏನಾದ್ರೂ ಓದಿದ್ರೆ ಆಟೋಗ್ರಾಫ್ ಭಾಗ ೨ ಮಾಡಿಯಾನು!

ನಾನು ಆಟೋಗ್ರಾಫ್ ಬುಕ್ ಮಾಡೇ ಇರಲಿಲ್ಲ.ಯಾಕಂದ್ರೆ ಹುಡುಗಿಯರಿಗೆ ಕೊಟ್ರೆ ’ಡಿಯರ್ ಬ್ರದರ್ ’ ಅಂತ ಹಾಕ್ತಾ ಇದ್ರು :(
shivu.k said…
ಸುಧೇಶ್,

ಲೇಖನ ಬಲು ಇಷ್ಜವಾಯಿತು...ಹಳೇ ನೆನಪುಗಳು ಹೀಗೇ ಆಟೋಗ್ರಾಫ್ ಮುಖಾಂತರ ಹೊರ ಬಂದರೆ ಎಷ್ಟು ಚೆನ್ನಾ ಅಲ್ವಾ..

“ಚರ೦ಡಿಯಲ್ಲಿ ಬಿದ್ದರೂಚಿರ೦ಜೀವಿಯಾಗು…..”

ಇದಂತೂ ಹೊಸ ಬ್ಲಾಗಿಗೆ ಶೀರ್ಷಿಕೆಯಾಗುವಂತಿದೆ...
ಧನ್ಯವಾದಗಳು..
Veni said…
As usual your writing skill was good, which makes everyone to smile at least once before they complete reading your post. Nice work but as always you don’t post articles very often, so I will lose patience checking your blog every day for a new post.
ನಿಜಮು.. ಈ ಲೇಖನಕ್ಕೆ ಮುಕ್ತಾಯದ ಅಗತ್ಯ ಇಲ್ಲ..
Unknown said…
ನೆನಪುಗಳ ಮಾತು ಮಧುರ....
Geetha said…
ತುಂಬ ಚೆನ್ನಾಗಿದೆ . ಈಗ ನಿಮ್ಮ ಜ್ವರ ಬಿಟ್ಟಿರುವದರಿಂದ ಬೇಗ ಬೇಗ ಹೊಸ ಬರಹ ನಿರೀಕ್ಷಿಸಬಹುದೇ...:)
This comment has been removed by the author.
Sudesh

Autograph please... Title is enough for one to grab the attention...

In my college, i was the only one guy apart from girls who bought a autograph book to capture everyone's favorites and signature's.

Yes i agree with you, what one cannot express directly face to face, does it by writing in the autograph book mostly.

Thanks for sharing such a nice experience of yours...

If anyone comes to me asking for a post on this theme, i would definitely give a try.. :P

It brought smiles....

Keep writing.. :-)

Cheers
ತುಂಬಾ ಚೆನ್ನಾಗಿದೆ ಲೇಖನ...
ನಾನು ಕಾಲೇಜಿನಲ್ಲಿ ಬರೆಸಿಕೊಂಡಿದ್ದ ಎರಡು ಭರ್ತಿ ಆಟೋಗ್ರಾಫ್ ಬುಕ್ಕುಗಳನ್ನು ತೆಗೆದುನೋಡಿದೆ...
ಸ್ನೇಹ ಮಧುರ... ನೆನಪು ಅಮರ... (ಯಾವುದೋ ಸಿನಿಮಾ ಡೈಲಾಗ್ ಅನ್ಕೋಬೇಡಿ!)
Anonymous said…
HEY SUDESH,
NIMMA SCHOOL JEEVANADA RASAVATTADA VISHAYA YENU BAREDILLA..ADELLA BANGALORE BANDA NANTARA START MADIDDA?
ADARA BAGGE ONDU LEKHANA BARALI..
Anonymous said…
何 ですか
few good widgets

http://free-blogger-help.blogspot.com/search/label/Blogger%20Widgets
ಸುಧೇಶ್,
ಮೊದಲು ನೀವು ಪೂರ್ಣ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
ಹೈಸ್ಕೂಲ್- ಕಾಲೇಜ್ ಗಳ ಕೊನೆಯ ದಿನದಂದು ಆಟೋಗ್ರಾಫ್ ಬುಕ್ ಹಿಡಿದು ಅಲೆಯುವುದು ಪ್ರಿಯವಾದ ಕೆಲಸವಾಗಿತ್ತು ಅಲ್ಲವೆ?
ಆಮೇಲೆ , ಅದರಲ್ಲಿ ಎಷ್ಟು ಸ್ನೇಹಿತರು ನಿಜವಾಗಿಯೂ ಸಂಪರ್ಕದಲ್ಲಿರುತ್ತಾರೊ!ಆದರೂ ಆ ಸಮಯದಲ್ಲಿ ಎಲ್ಲರನ್ನು ನಮ್ಮ ನೆನಪಿನ ಕೋಣೆಯೊಳಗೆ ಬಂಧಿಸಿಡುವ ಬಯಕೆ. ಆಟೋಗ್ರಾಫ್ ಬರೆಯುವವರೂ ಕೂಡ ತಾವು ಬರೆದಿದ್ದು ನೆನಪಿನಲ್ಲುಳಿಯುವಂತೆ ಏನೇನೋ ಹೊಸರೀತಿಯಲ್ಲಿ, ವಿಚಿತ್ರ ಶೈಲಿಯಲ್ಲಿ ಬರೆಯುವುದು, ಅಪರೂಪಕ್ಕೊಮ್ಮೆ ಮಾತನಾಡಿಸುವವರೂ ಸಹ ತಮ್ಮಷ್ಟು ’ ಕ್ಲೋಸ್ ಫ್ರೆಂಡ್’ ಯಾರೂ ಇಲ್ಲ ಎನ್ನುವಂತೆ ಬರೆಯುವುದು .... ಹಂ. ಎಲ್ಲವನ್ನೂ ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು.
ಅಂದಹಾಗೇ, " ಚರಂಡಿಯಲ್ಲಿ ಬಿದ್ದರೂ ಚಿರಂಜೀವಿಯಾಗು " ಈ ಹಾರೈಕೆ ಚೆನ್ನಾಗಿದೆ.
This comment has been removed by the author.
ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ತು೦ಬಾ ಧನ್ಯವಾದಗಳು... ನಿಮ್ಮ ನಲ್ಮೆಯ ನುಡಿಗಳೇ ನನ್ನ ಮು೦ದಿನ ಬರಹಗಳಿಗೆ ಪ್ರೇರಣೆ.
Ittigecement said…
ಸುಧೇಶ್....

ಬೇಸರಿಸ ಬೇಡಿ...
ತುಂಬಾ ತಡವಾಗಿ ಬಂದೆ....

ನೀವು ಹುಷಾರಿಗಿದ್ದೀರಲ್ಲ ಈಗ..?

ನನ್ನ ಬಳಿ ಆಟೋಗ್ರಾಫ್ ಪುಸ್ತಕ ಇರಲಿಲ್ಲ...
ನನ್ನ ಸ್ನೇಹಿತರ ಬಳಿ ಇತ್ತು...
ಅದಕ್ಕೆಲ್ಲ ಹಣದ ತೊಂದರೆ ಇತ್ತು...
ಅದು ಅಷ್ಟೆಲ್ಲ ಮಹತ್ವ ಎಂದು ಆಗ ಅನಿಸಲಿಲ್ಲ...
ಆದರೆ...
ಈಗ ಅನಿಸುತ್ತಿದೆ...
ನನ್ನ ಬಳಿಯೂ ಆಟೋಗ್ರಾಫ್ ಬುಕ್ ಇರಬೇಕಿತ್ತು ಅಂತ....
ಚೆನ್ನಾಗಿ ಬರೆದಿದ್ದೀರಿ...
ಪ್ರಕಾಶಣ್ಣ...

ತಡವಾಗಿ ಬ೦ದಿದ್ದಕ್ಕೆ ಬೇಜಾರಿಲ್ಲ...

ಈಗ ನಾನು ಸೂಪರು...

ನಿಮ್ಮ ಬಳಿ ಆಟೋಗ್ರಾಫ್ ಇಲ್ಲದಿದ್ದರೇನ೦ತೆ.... ಬ್ಲಾಗಿನಲ್ಲಿ ನೀವು ನಿಮ್ಮ ಅನುಭವಗಳನ್ನು ಬರೆಯುತ್ತೀರಲ್ಲ... ಆ ಸವಿನೆನಪುಗಳೇ ಎಷ್ಟು ಸು೦ದರವಾಗಿದೆ...
ಜಲನಯನ said…
ಸುಧೇಶ್, ಎಂತಾ ಮಾರಾರೆ...ಎಂಚೆ ಉಳ್ಳೆರ್...
ನನ್ನ ಬ್ಲಾಗಿಗೆ ಬಂದು ಮನಸಾ ಎರಡು ವಾಕ್ಯ ಪ್ರೋತ್ಸಾಹದ್ದು ಬರೆದಿದ್ದೀರಾ...ಬಹಳ ಸಂತೋಷ...mutual ಮುಂದುವರೆಸೋಕೆ..ನನ್ ಒಪ್ಪಿಗೆ ...
ನಿಮ್ಮ ಕಾಲೇಜಿನ ಕೊನೆ ದಿನಗಳು...ಅಭ್ಯಾಸಕಾಲದ ಕ್ಷಣಗಳನ್ನ ಚನ್ನಾಗಿ ತೆರೆದುಇಟ್ಟಿದೀರ...ನಿಮ್ಮ ಇತರ ಪೋಸ್ಟ್ ಸಹಾ ನೋಡಿ ಪ್ರತಿಕ್ರಿಯಿಸ್ತೇನೆ...ಆಯ್ತಾ...ಮತ್ತೆ ಸ್ವಾಗತ ನನ್ನ ಬ್ಲಾಗ್ ಗೆ...

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ