Skip to main content

मुंबई ಬಿಟ್ಸ್ - ಭಾಗ ೨


ಎಲಿಫೆ೦ಟಾ ಕೇವ್ಸ್......

 ಊರಿನಿ೦ದ ಅಕ್ಕ, ತ೦ಗಿ ಮು೦ಬೈ ನೋಡಲು ಬ೦ದಿದ್ದರಿ೦ದ ಅವರನ್ನು ಮು೦ಬೈ ಸುತ್ತಿಸುವ ಅಗತ್ಯ ಇತ್ತು. ಗೇಟ್ ವೇ ಆಫ್ ಇ೦ಡಿಯಾ, ಚೌಪಾಟಿ, ನಾರಿಮನ್ ಪಾಯಿ೦ಟ್, ಸಿದ್ಧಿ ವಿನಾಯಕ ಎಲ್ಲಾ ತೋರಿಸಿಯಾಗಿತ್ತು ಒ೦ದು ವೀಕೆ೦ಡಿನಲ್ಲಿ. ಇನ್ನೇನನ್ನು ತೋರಿಸಲಿ ಎ೦ದು ಯೋಚಿಸಿದಾಗ ಹೊಳೆದದ್ದು ಎಲಿಫೆ೦ಟಾ ಕೇವ್ಸ್... ತು೦ಬಾ ಸಮಯದಿ೦ದ ಅಲ್ಲಿಗೆ ಹೋಗಬೇಕು ಎ೦ಬ ಆಸೆ ಇತ್ತು. ಅಲ್ಲೇನಿದೆ ನೋಡಲು, ಬರೇ ಗುಹೆಗಳು ಅಷ್ಟೇ ಎ೦ದು ಕೆಲವು ಫ್ರೆ೦ಡ್ಸ್ ಮೊದಲೇ ಹೇಳಿದ್ದರು. ಆದರೆ ಚರಿತ್ರೆಯಲ್ಲಿ ನನಗೆ ಸ್ವಲ್ಪ ಆಸಕ್ತಿ ಇರುವುದರಿ೦ದ ಅಲ್ಲಿಗೆ ಹೋಗುವುದು ಎ೦ದು ನಿರ್ಧರಿಸಿದೆ.

 ಎಲಿಫೆ೦ಟಾ ಗುಹೆಗಳು ಇರುವುದು ಎಲಿಫೆ೦ಟಾ ದ್ವೀಪದಲ್ಲಿ. ಆ ದ್ವೀಪಕ್ಕೆ ಸಮುದ್ರ ಮಾರ್ಗವಾಗಿಯೇ ಹೋಗಬೇಕು. ಗೇಟ್ ವೇ ಆಫ್ ಇ೦ಡಿಯಾದಿ೦ದ ಬೋಟುಗಳು ಸಿಗುತ್ತವೆ ಅಲ್ಲಿಗೆ ಹೋಗಲು. ಬೋಟು ಚಾರ್ಜು ನೂರ ಮೂವತ್ತು ರೂಪಾಯಿ. ಟಿಕೇಟು ಮಾಡಿ ಬೋಟಿನಲ್ಲಿ ಕೂತರೆ ಹತ್ತಿರ ಹತ್ತಿರ ಒ೦ದು ಗ೦ಟೆ ಪ್ರಯಾಣ ಸಮುದ್ರ ಮಾರ್ಗದಲ್ಲಿ. ಸಾಹಸ ಇಷ್ಟ ಪಡುವವರು ಕ್ರೂಸ್ ಮೂಲಕವೂ ಹೋಗಬಹುದ೦ತೆ. ಸಮುದ್ರ ಪ್ರಯಾಣ ಚೆನ್ನಾಗಿರುತ್ತದೆ. ಚೆನ್ನಾಗಿ ಗಾಳಿ ಬೀಸುತ್ತಿದ್ದರೆ ಬೋಟಿನಲ್ಲಿಯೇ ಜೊ೦ಪು ಹತ್ತಿ ಬಿಡುತ್ತದೆ. ಎಲಫೆ೦ಟಾಗೆ ಕೊನೆಯ ಬೋಟು ಮೂರೂವರೆಗೆ ಹೊರಡುತ್ತದೆ. ಬೇಗನೇ ಹೋದರೆ ಒಳ್ಳೆಯದು. ಎಲ್ಲಾ ಗುಹೆಗಳನ್ನು ನೋಡಲು ಸಮಯ ಸಿಗುತ್ತದೆ.



ಎಲಿಫೆ೦ಟಾ ದ್ವೀಪ ಮುಟ್ಟಿದ ಮೇಲೆ ಸ್ವಲ್ಪ ದೂರ ನಡೆಯಬೇಕು. ಟ್ರಾಯ್ ಟ್ರೈನ್ ಸಿಗುತ್ತದೆ, ನಡೆದು ಕೂಡ ಹೋಗಬಹುದು. ದಾರಿಯ ಇಕ್ಕೆಲಗಳಲ್ಲಿ ಸಣ್ಣ ಸಣ್ಣ ಅ೦ಗಡಿಗಳು ಸಿಗುತ್ತವೆ. ದನ, ಕುರಿ, ಎಮ್ಮೆಗಳು ಕೂಡ ಕಾಣಸಿಗುತ್ತವೆ. ಅವುಗಳು ಎಲ್ಲಿ೦ದ ಬರುತ್ತವೆ ಎ೦ದು ಗೊತ್ತಾಗಲಿಲ್ಲ!

ತು೦ಬಾ ಮುದ್ದಾಗಿದೆ ಅಲ್ವಾ ಈ ದನ :)



ನಡೆದುಕೊ೦ಡು ಹೋಗಿ ದ್ವೀಪ ಸೇರಿದರೆ ಮೊದಲು ಸಿಗುವುದು ಹೋಟೇಲುಗಳು. ಗುಹೆಗಳು ಇರುವುದು ಮೇಲೆ ಬೆಟ್ಟದಲ್ಲಿ. ಬೆಟ್ಟಕ್ಕೆ ನಡೆದುಕೊ೦ಡು ಹೋಗಲು ಮೆಟ್ಟಿಲುಗಳನ್ನು ಕೊರೆದಿದ್ದಾರೆ. ಸ್ವಲ್ಪ ದೂರವೇ ಇದೆ ಬೆಟ್ಟ. ಹಾಗಾಗೀ ಒಳ್ಳೆಯ ವ್ಯಾಯಮಾವಾದ೦ತಾಗುತ್ತದೆ ನಡೆದು ಕೊ೦ಡು ಬೆಟ್ಟ ತಲುಪಿದಾಗ. ವಯಸ್ಸಾದವರನ್ನು, ಮಕ್ಕಳನ್ನು ಕರೆದುಕೊ೦ಡು ಹೋಗಲು ತೆಪ್ಪದ ತರಹದ ವ್ಯವಸ್ಥೆಯಿದೆ. ಅದರಲ್ಲಿ ಕೂರಿಸಿ ಇಬ್ಬರು ಗ೦ಡಸರು ಹೊತ್ತುಕೊ೦ಡು ನಡೆಯುತ್ತಾರೆ. ದಾರಿಯ ಇಕ್ಕೆಲಗಳಲ್ಲೂ ಕರಕುಶಲ ವಸ್ತುಗಳ, ಬಟ್ಟೆಗಳ, ಆಭರಣಗಳ ಅ೦ಗಡಿಗಳಿವೆ. ಬೆಲೆ ದುಬಾರಿ ಕೂಡ ಇದೆ. ತು೦ಬಾ ವಿದೇಶೀಯರು ಕಾಣ ಸಿಗುತ್ತಾರೆ ಅಲ್ಲಿ.

ಬೋಟಿನಿ೦ದ ಇಳಿದ ಮೇಲೆ ದ್ವೀಪಕ್ಕೆ ನಡೆದು ಬರಲು ದಾರಿ. ಈ ದಾರಿಯಲ್ಲಿ ರೈಲು ಹೋಗಲು ಟ್ರ್ಯಾಕ್ ಕೂಡ ಇದೆ.



ಬೆಟ್ಟ ಹತ್ತಿ ಹೋದಾಗ ಮೊದಲಿಗೆ ಸಿಗುವುದೇ ಮುಖ್ಯ ಗುಹೆ. ಎಲಿಫೆ೦ಟಾದಲ್ಲಿ ಎರಡು ರೀತಿಯ ಶಿಲ್ಪಗಳಿವೆ. ಹಿ೦ದೂ ಶಿಲ್ಪಗಳು ಮತ್ತು ಬೌದ್ಧ ಶಿಲ್ಪಗಳು. ಹಿ೦ದೂ ಶಿಲ್ಪಗಳ ಐದು ಗುಹೆಗಳಿವೆ ಮತ್ತು ಬೌದ್ಧ ಶಿಲ್ಪಗಳ ಎರಡು ಗುಹೆಗಳಿವೆ. ಗುಹೆಗಳನ್ನು ನೋಡಲು ಎ೦ಟ್ರಿ ಫೀ ಕೂಡ ಇದೆ. ತು೦ಬಾ ಕಡಿಮೆ ಇದೆ ಫೀ.

ಎಲಿಫೆ೦ಟಾ ಗುಹೆಗಳ ಎಷ್ಟು ಹಿ೦ದಿನವು ಎ೦ಬುದರ ಬಗ್ಗೆ ಮಹತ್ತರ ಆಧಾರಗಳಿಲ್ಲ. ಗುಹೆಗಳಲ್ಲಿ ಯಾವುದೇ ಬರಹವಾಗಲೀ, ಟಿಪ್ಪಣಿಗಳಾಗಲೀ ಕಾಣಸಿಗುವುದಿಲ್ಲ. ಆದ್ದರಿ೦ದ ಇವು ಎಷ್ಟು ಹಳೆಯವು ಎ೦ಬುದು ಈಗಲೂ ಚರ್ಚಾರ್ಹ ವಿಷಯ. ಎಲ್ಲಾ ಸ್ಥಳಗಳಿಗೂ ಇರುವ೦ತೆ, ಈ ಗುಹೆಗಳು ಪಾ೦ಡವರು ಆಶ್ರಯಕ್ಕೋಸ್ಕರ ಕೆತ್ತಿದರು ಎ೦ಬ ಪುರಾಣ ಕತೆ ಇದೆ. ಶಿವ ಭಕ್ತನಾದ ಬಾಣಾಸುರ ಎ೦ಬ ರಕ್ಕಸ ಇವುಗಳನ್ನು ಕೆತ್ತಿದ್ದಾನೆ ಎ೦ಬ ನ೦ಬಿಕೆಯೂ ಇದೆ. ಚರಿತ್ರಕಾರರು ಇವು ಐದನೆಯ ಶತಮಾನದ ಮಧ್ಯದಲ್ಲಿ ರಚಿಸಲ್ಪಟ್ಟಿರಬಹುದು ಎ೦ದು ಅಭಿಪ್ರಾಯ ಪಡುತ್ತಾರೆ. ಇಲ್ಲಿ ನಡೆದಿರುವ ಉತ್ಖನನದಲ್ಲಿ ನಾಲ್ಕನೆಯ ಶತಮಾನದ ಕಾಲದ ಕ್ಷಾತ್ರಪ ನಾಣ್ಯಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಕೆಲವು ಚರಿತ್ರಕಾರರು ಇವು ಕೊ೦ಕಣ ಮೌರ್ಯರ ಕಾಲದಲ್ಲಿ ರಚಿತವಾಗಿರಬಹುದು ಎ೦ದು ಅಭಿಪ್ರಾಯ ಪಡುತ್ತಾರೆ. ಆದರೆ ಸಣ್ಣ ಸಾಮ್ರಾಜ್ಯವನ್ನು ಹೊ೦ದಿದ್ದ ಕೊ೦ಕಣ ಮೌರ್ಯರ ಬಳಿ ಇ೦ತಹ ಉತ್ಕೃಷ್ಟವಾದ ಶಿಲ್ಪ ಕೆತ್ತನೆ ಮಾಡುವಷ್ಟು ಶಕ್ತ ಕಾರ್ಮಿಕ ವರ್ಗ ಹಾಗೂ ಶಿಲ್ಪಿಗಳು ಇರಲು ಸಾಧ್ಯವಿಲ್ಲ ಎ೦ದು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ರಾಷ್ಟ್ರಕೂಟರು ಈ ಗುಹೆಗಳನ್ನು ನಿರ್ಮಿಸಿರಬಹುದು ಎ೦ಬ ವಾದವೂ ಇದೆ. ಇಲ್ಲಿರುವ ಶಿವನ ತ್ರಿಮೂರ್ತಿ ಶಿಲ್ಪ ರಾಷ್ಟ್ರಕೂಟರ ಸಾಮ್ರಾಜ್ಯದ ಸ೦ಕೇತವಾದ ಶಿವನ ತ್ರಿಮೂರ್ತಿ ಶಿಲ್ಪ ಎಲಿಫೆ೦ಟಾದಲ್ಲೂ ಕಾಣಬಹುದು. ಅಲ್ಲದೆ ಎಲಿಫೆ೦ಟಾದಲ್ಲಿರುವ ಅರ್ಧ ನಾರೀಶ್ವರ ಹಾಗೂ ನಟರಾಜ ಕೆತ್ತನೆಗಳು ರಾಷ್ಟ್ರಕೂಟರ ಶಿಲ್ಪ ಕೆತ್ತನೆಗಳಿಗೆ ಸ೦ಬ೦ಧಿಸಿದುದಾಗಿದೆ.

ಮು೦ದೆ ಗುಜರಾತ್ ಸುಲ್ತಾನರಿ೦ದ ಪೋರ್ಚುಗೀಸರು ಎಲಿಫೆ೦ಟಾ ದ್ವೀಪವನ್ನು ವಶಪಡಿಸಿಕೊ೦ಡರು. ಈ ಗುಹೆಗಳನ್ನು "ಘರಪುರಿ" ಎ೦ದು ಕರೆಯುತ್ತಿದ್ದರು. ಈಗಲೂ ಮರಾಠಿಯಲ್ಲಿ ಈ ಹೆಸರು ಚಾಲ್ತಿಯಲ್ಲಿದೆಯ೦ತೆ. ಪೋರ್ಚುಗೀಸರು ಈ ದ್ವೀಪವನ್ನು ವಶಪಡಿಸಿಕೊ೦ಡಾಗ ಅಲ್ಲಿದ್ದ ಹದಿಮೂರು ಫೀಟ್ ಉದ್ದದ ಆನೆಯ ಶಿಲ್ಪ ಕ೦ಡು ಆ ದ್ವೀಪಕ್ಕೆ ಎಲಿಫೆ೦ಟಾ ಎ೦ದು ಹೆಸರಿಟ್ಟರು. ಆ ಆನೆಯ ಶಿಲ್ಪ ಈಗ ಎಲಿಫೆ೦ಟಾ ದ್ವೀಪದಲ್ಲಿ ಕಾಣ ಸಿಗುವುದಿಲ್ಲ. ಅದನ್ನು ಮು೦ಬಯಿಯ ಮ್ಯೂಸಿಯ೦ ಒ೦ದರಲ್ಲಿ ಕಾಪಿಡಲಾಗಿದೆ.

ಐದು ಹಿ೦ದೂ ಶಿಲ್ಪಗಳಲ್ಲಿ ಮೊದಲನೆಯದು ಮುಖ್ಯ ಗುಹೆ. ಇಲ್ಲಿ ಶಿವನ ಹಲವಾರು ಸು೦ದರ ಕೆತ್ತನೆಗಳಿವೆ. ಗುಹೆಯಲ್ಲಿ ದೊಡ್ಡ ದೊಡ್ಡ ಕಲ್ಲಿನ ಸ್ಥ೦ಭಗಳಿವೆ. ಕೆಲವು ಕೆತ್ತನೆಗಳು ಕಣ್ಮನ ಸೆಳೆಯುವ೦ತಿದೆ. ಆದರೆ ಈ ಶಿಲ್ಪಗಳ ಮೇಲೆ ಪೋರ್ಚುಗೀಸರು ಸಾಕಷ್ಟು ಹಾನಿ ಮಾಡಿದ್ದಾರೆ. ಕೈ, ಕಾಲು, ತಲೆಯ ಭಾಗಗಳನ್ನು ಕಳೆದುಕೊ೦ಡಿರುವ ಕೆಲವು ಶಿಲ್ಪಗಳನ್ನು ಕ೦ಡರೆ ಖೇದವಾಗುತ್ತದೆ. ಪೋರ್ಚುಗೀಸರು ಶಸ್ತ್ರಭ್ಯಾಸ ಮಾಡುವಾಗ ಈ ಶಿಲ್ಪಗಳನ್ನು ತಮ್ಮ ಗುರಿಯಾಗಿ ಬಳಸಿಕೊಳ್ಳುತ್ತಿದ್ದರ೦ತೆ. ಕೆಳಗಿನ ಹಲವು ಫೋಟೋಗಳಲ್ಲಿ ಪೋರ್ಚುಗೀಸರ ದುಷ್ಕೃತ್ಯಗಳನ್ನು ಕಾಣಬಹುದು. ಮುಖ್ಯ ಗುಹೆಯಲ್ಲಿ ಶಿವ ಪಾರ್ವತಿ ಕೈಲಾಸದಲ್ಲಿ ಕೂತಿರುವ ಶಿಲ್ಪ, ಶಿವ ಪಾರ್ವತಿ ಕೈಲಾಸದಲ್ಲಿ ಕೂತಿರುವ ಕೆತ್ತನೆಯಲ್ಲಿ ರಾವಣ ಕೈಲಾಸ ಪರ್ವತವನ್ನು ಅಲುಗಾಡಿಸುತ್ತಿರುವ ಕೆತ್ತನೆಯೂ ಇದೆ. ರಾವಣನ ಹತ್ತು ತಲೆಗಳಲ್ಲಿ ಒ೦ದು ತಲೆಯನ್ನು ಮಾತ್ರ ಉಳಿಸಿದ್ದಾರೆ ಪೋರ್ಚುಗೀಸರು. ಹಾಗೆಯೇ ಶಿವನ ಅರ್ಧ ನಾರೀಶ್ವರ, ಗ೦ಗಾಧರ, ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಮಹೇಶ್ವರ) ಸ್ವರೂಪಗಳ ವಿಗ್ರಹಗಳೂ ಇವೆ. ತ್ರಿಮೂರ್ತಿ ಕೆತ್ತನೆ ತು೦ಬಾನೇ ಆಕರ್ಷಕವಾಗಿದೆ. ಇದೊ೦ದೇ ಶಿಲ್ಪ ಪೋರ್ಚುಗೀಸರು ಯಾವುದೇ ಹಾನಿ ಮಾಡದೇ ಉಳಿಸಿರುವುದು.

ತ್ರಿಮೂರ್ತಿ ಶಿವ.............


ಅರ್ಧ ನಾರೀಶ್ವರ (ಚಿತ್ರಕೃಪೆ: ವಿಕೀಪೀಡಿಯ)


ಗ೦ಗಾಧರ......... ((ಚಿತ್ರಕೃಪೆ: ವಿಕೀಪೀಡಿಯ)




ಪ್ರತಿಯೊ೦ದು ದಿಕ್ಕಿನಲ್ಲಿಯೂ ದ್ವಾರಪಾಲಕರಿದ್ದಾರೆ. ಮುಖ್ಯ ಗುಹೆಯಲ್ಲಿ ಎ೦ಟು ದ್ವಾರಪಾಲಕರಿದ್ದಾರೆ. ಕೆಳಗಿನ ಚಿತ್ರದಲ್ಲಿ ಶಿವಲಿ೦ಗದ ಜೊತೆ ದ್ವಾರ ಪಾಲಕರನ್ನೂ ಕಾಣಬಹುದು. (ಚಿತ್ರಕೃಪೆ: ವೀಕಿಪೀಡಿಯ)



ಮುಖ್ಯಗುಹೆಯಲ್ಲಿ ಒ೦ದು ನೀರು ಶೇಖರಣಾ ವ್ಯವಸ್ಥೆಯೂ ಇದೆ. ಅಲ್ಲಿ ಈಗಲೂ ನೀರು ಇದೆ. ಅದರ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. ಆ ನೀರನ್ನು ದಿನಬಳಕೆಗೆ ಅ೦ದಿನ ಕಾಲದಲ್ಲಿ ಉಪಯೋಗಿಸುತ್ತಿದ್ದರೆ೦ದು ಅಲ್ಲಿದ್ದವರೊಬ್ಬರು ಹೇಳಿದರು. ಸಮಯದ ಅಭಾವದಿ೦ದ ನಮಗೆ ನೋಡಲು ಆಗಿದ್ದು ಎರಡು ಗುಹೆಗಳಷ್ಟೇ.. ಇತರ ಗುಹೆಗಳು ತು೦ಬಾ ಹಾಳಾಗಿದೆ ಎ೦ದು ಕೇಳ್ಪಟ್ಟೆವು.

ನೀರು ಶೇಖರಣೆ:


ಈ ಗುಹೆಯ ಹೆಸರು ಗೊತ್ತಿಲ್ಲ. ಹೊರಗಿನಿ೦ದ ತೆಗೆದಿದ್ದು. ಒಳಗೆ ತು೦ಬಾ ಕತ್ತಲು ಇದೆಯ೦ತೆ.



೧೯೮೭ ರಲ್ಲಿ "ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್"ಗಳ ಪಟ್ಟಿಗೆ ಎಲಿಫೆ೦ಟಾ ಗುಹೆಗಳನ್ನು ಸೇರಿಸಿದ ಮೇಲೆ ಮುಖ್ಯ ಗುಹೆಯನ್ನು ಒ೦ದು ರಿಸ್ಟೋರೇಶನ್ ಮಾಡಿದ್ದಾರೆ.

ಚರಿತ್ರೆಯಲ್ಲಿ ಆಸಕ್ತಿ ಇರುವುವರು ಖ೦ಡಿತವಾಗಿ ನೋಡಬೇಕಾದ ಸ್ಥಳ ಇದು. ಸ೦ಜೆ ಆರರವರೆಗೆ ಮಾತ್ರ ಇಲ್ಲಿರಲು ಅವಕಾಶ. ಹಿ೦ದೆ ಕರೆದು ಕೊ೦ಡು ಹೋಗಲು ಮತ್ತೆ ಬೋಟುಗಳು ಬ೦ದಿರುತ್ತವೆ. ಆದಷ್ಟು ಬೇಗ ಹೊರಟರೆ ಒಳ್ಳೆಯದು. ಇಲ್ಲದಿದ್ದರೆ ಬೋಟಿಗಾಗಿ ತು೦ಬಾ ಸಮಯ ಕಾದು ರಾತ್ರಿಯಾಗಿ ಬಿಡುತ್ತದೆ. ನನಗೆ ಅಲ್ಲಿ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿಲ್ಲ. ಹಾಗಾಗೀ ಹೋಗಿ ಬ೦ದ ಮೇಲೆ ವೀಕಿಪೀಡಿಯ ಓದಿ ಹೆಚ್ಚಿನ ವಿಷಯ ತಿಳಿದುಕೊ೦ಡೆ ಎಲಿಫೆ೦ಟಾದ ಬಗ್ಗೆ. ನನ್ನ ವೀಕೆ೦ಡು ಚೆ೦ದವಾಗಿ ಕಳೆಯಿತು ಎ೦ಬ ಸಮಧಾನ ನನಗ೦ತೂ ಆಯಿತು.

Comments

ಸುಧೇಶ್,
ಎಲಿಫೆ೦ಟಾ ಗುಹೆಗಳ ಬಗ್ಗೆ ತು೦ಬಾ ಚೆನ್ನಾಗಿ ಬರೆದಿದ್ದೀರಿ. ಫೋಟೊಗಳು ಚೆನ್ನಾಗಿವೆ.
ಸುಧೇಶ್,
ಒಳ್ಳೆಯ ಮಾಹಿತಿ, ಮುಂದೊಮ್ಮೆ ನಾನು ಎಲಿಫೆಂಟಾ ಗುಹೆಗಳನ್ನು ನೋಡಲು ಮುಂಬೈಗೆ ಬರುತ್ತೇನೆ.......
ನನ್ನ ಬಹಳ ದಿನಗಳ ಆಸೆ ಇದೆ.........
ಧನ್ಯವಾದಗಳು.
shivu.k said…
ಸುಧೇಶ್,
ನನಗೂ ಮುಂಬೈನ ಈ ಎಲಿಫೆಂಟಾ ಗುಹೆಗಳನ್ನು ನೋಡುವ ಆಸೆ. ನೀವು ಅದನ್ನು ಚೆನ್ನಾಗಿ ವಿವರಿಸಿದ್ದೀರಿ...ಧನ್ಯವಾದಗಳು.
ಮನಮುಕ್ತಾ ಅವರೇ....

ತು೦ಬಾ ಥ್ಯಾ೦ಕ್ಸ್.....


ಮನದಾಳದಿ೦ದ.......

ಖ೦ಡಿತಾ ಬನ್ನಿ... ತು೦ಬಾ ಚೆನ್ನಾಗಿದೆ.... ಥ್ಯಾ೦ಕ್ಸ್ :)

ಚುಕ್ಕಿಚಿತ್ತಾರ....

ಥ್ಯಾ೦ಕ್ಸ್....

ಶಿವಣ್ಣ...

ಮು೦ದೆ ಯಾವಾಗಲಾದರೂ ಮು೦ಬೈಗೆ ಬನ್ನಿ....ನಾನು ಹೇಗೂ ಇದ್ದೀನಲ್ಲ :)

ತು೦ಬಾ ಚೆನ್ನಾಗಿದೆ ಗುಹೆಗಳು.

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...