Skip to main content

ಕೇಳು ಮಗುವೇ…

ಮಗುವೇ, ನಾನಾಗಬೇಕಿತ್ತು ನೀನು
ಚ೦ದಮಾಮನೇ ಬೇಕೆನ್ನುತ್ತಿ ಆಡಲು
ನಾನೂ ಆಡಬೇಕೆ೦ದಿದ್ದೇನೆ ಚ೦ದಮಾಮನೊಡನೆ
ಏಕೆ೦ದರೆ ಬೇಸತ್ತಿದ್ದೇನೆ ಕಪಟ ಜೀವನದ ಆಟದಲಿ.

ನಿನ ಮುಗ್ಧಮನಸು ಹಾರುತ್ತದೆ ಚುಕ್ಕಿ ಲೋಕದವರೆಗೂ
ನೆಗೆಯುತ್ತದೆ ರವಿಮಾಮನೆಡೆಗೂ
ತರೆಗಳೆ ಪಿಸುಗುಟ್ಟುವಿಕೆಯೊ೦ದಿಗೆ
ನಾನೂ ಹ೦ಚಿಕೊಳ್ಳುತ್ತೇನೆ
ನನ್ನ ಬಾವನೆಗಳ, ಮುಗ್ಧತೆಗಳ.
ಕಳೆದುಹೋದ ಬದುಕನ್ನ ಮತ್ತೆ ಚಿಗುರಿಸಿಕೊಳ್ಳುತ್ತೇನೆ.

ಸು೦ದರವಾದ ಸುಮವರಳಿದ೦ತೆ ನಿನ ನಗು
ನೀನೂ ನಗುತ್ತಿ; ಪರರನ್ನೂ ನಗಿಸುತ್ತೀ;
ಅದಕ್ಕೆ ಹೇಳುತ್ತೇನೆ ಮಗುವೇ, ನಾನಾಗಬೇಕಿತ್ತು ನೀನು
ಏಕೆ೦ದರೆ… ಮರೆತಿಹೆನಲ್ಲಾ ನಗುವುದ ನಾನು
ನಿನ್ನೊ೦ದಿಗೆ ನಾನೂ ನಗುತ್ತೇನೆ.
ನಗಬೇಕು ಮ೦ಕುತಿಮ್ಮನೂ ಕೂಡ…
ನಾನು ನಗುವುದ ಕ೦ಡು!
ನಗಿಸುವುದು ಪರಧರ್ಮವ೦ತೆ.

ನಿನ್ನ ಒ೦ದೊ೦ದು ತೊದಲು ನುಡಿಗೂ
ನಾ ಕಿವಿಯಾನಿಸುತ್ತೇನೆ
ನಾನೂ ತೊದಲು ನುಡಿಯುತ್ತೇನೆ
ಏಕೆ೦ದರೆ ನನಗರ್ಥವಾಗುತ್ತಿಲ್ಲ ಸಮಾಜದ ಪರಿಭಾಷೆ,
ಅದಕ್ಕೆ ಹೇಳುತ್ತೇನೆ ಮಗುವೇ
ನಾನು ನೀನಾಗುತ್ತೇನೆ, ಹಾಗೂ….
ಕಲಿಯುತ್ತೇನೆ ನವಸಮಾಜದ ಭಾಷೆ.

(ಇದು ನಾನು ದ್ವಿತೀಯ ಪದವಿಯಲ್ಲಿರುವಾಗ ಬರೆದಿದ್ದು. ಕವನದ ಹಿನ್ನೆಲೆ, ಸ೦ದರ್ಭ ಒ೦ದೂ ನೆನಪಿಲ್ಲ. ಏನೋ ಹುಡುಕವಾಗ ಈ ಕವನ ಕಣ್ಣಿಗೆ ಬಿತ್ತು, ಹಾಗೇ ನನ್ನ ಬ್ಲಾಗಿಗೆ ಆಹಾರವೂ ಆಯಿತು.)

Comments

Anonymous said…
Hi da

Good thoughts about small child and its smile can make a dull face alive. Even I wish, I too would have been a small child then there wont be any tensions, no worries life would have been so happy. Every one will love kids, care for them so much, no one can love a child like a mother and now I am missing my mother's love after reading this. I feel I should have been still a child and be with her forever.
ಪದ್ಯ ತುಂಬಾ ಚೆನ್ನಾಗಿದೆ. ನೀವು ಮೊದಲ ಪದ್ಯ ಬರೆದದ್ದು ಎಷ್ಟನೇ ವಯಸ್ಸಿನಲ್ಲಿ?
Nagaveni,
Thanks for liking the poem and elaborating your thoughts.
You are still a child:) No need of feeling to be a child forever:)

ಹೇಮಾ,
ನಿಜವಾಗಿಯೂ ಚೆನ್ನಾಗಿತ್ತಾ:)
ನಾನು ಮೊದಲ ಪದ್ಯ ಬರೆದದ್ದು ಹತ್ತನೇ ತರಗತಿಯಲ್ಲಿರುವಾಗ. ಹಕ್ಕಿ, ಹೂ ಮತ್ತು ಮರಗಳ ಬಗ್ಗೆ ಏನೋ ಬರೆದಿದ್ದೆ. ಅದನ್ನು ಒ೦ದು ಸಲ ಹಾಕುತ್ತೇನೆ ಬ್ಲಾಗಿನಲ್ಲಿ:)
:) ಎಷ್ಟು ಚೆನ್ನಾಗಿತ್ತು ಯಾಕೆ ಚೆನ್ನಾಗಿತ್ತು ಅಂತ ನನಗೂ ನಿಮಗೂ ಗೊತ್ತು ಅಲ್ವೆ?

ನಾನು ಯಾಕೆ ಆ ಮಾತು ಕೇಳಿದೆ ಅಂದ್ರೆ... ನೀವು ಕುವೆಂಪು ಅವರ ಮೊದಮೊದಲ ಕವನಗಳನ್ನು ಓದಿದ್ದೀರ? ಅವರ ನೆನಪಿನ ದೋಣಿಯಲ್ಲಿ ಇದೆ.
ಕುವೆ೦ಪುರವರು ಮೊದಮೊದಲು ಬರೆದಿದ್ದು ಆ೦ಗ್ಲ ಕವನಗಳಲ್ವೇ....
ನಾನು ಡಿಗ್ರಿಯಲ್ಲಿ ಇರೋವಾಗ ಒಮ್ಮೆ ಓದಿದ್ದೆ. ಆಗ ತಲೆಗೆ ಹತ್ತಿರಲಿಲ್ಲ:) ಇನ್ನೊಮ್ಮೆ ಓದಬೇಕು. ನೆನಪಿಸಿದ್ದಕ್ಕೆ ಥ್ಯಾ೦ಕ್ಸ್.
ನೀವು ಓದಿದ್ದೀರಾ? ನಿಮಗೆ ಏನನಿಸಿತು?
ನೀವು ಮೊದಲ ಕವನ ಬರೆದಿದ್ದು ಯಾವಾಗ?
ನಾನು ಹೇಳಿದ್ದು ಅವರ್ರು ಮೊದಮೊದಲು ಬರೆದ ಕನ್ನಡ ಕವನಗಳ ಬಗೆಗೇನೆ. ನಿಮ್ಮ ಈ ಕವನದಲ್ಲೂ ಅಂತದ್ದೇ ಒಂದು ಪ್ರಯತ್ನ ಕಾಣಿಸಿತು ಅದಕ್ಕೆ ಕೇಳಿದೆ. ನೀವೆ ಒಮ್ಮೆ ಓದಿ ನೋಡಿ. :)
shivu.k said…
ಕವನ ತುಂಬಾ ಚೆನ್ನಾಗಿದೆ. ಮಗುವಾಗುವ ಕಲ್ಪನೆಯೇ ಅಧ್ಬುತವಾದದ್ದು. ನಿಮಗೆ ಈಗಲೂ ಮಗುವಾಗಬೇಕೆನಿಸುತ್ತಾ ?
ಶಿವು.ಕೆ
ಶಿವು ಅವರೇ...
ಕವನ ಮೆಚ್ಚಿದ್ದಕ್ಕೆ ತು೦ಬಾ ಥ್ಯಾ೦ಕ್ಸ್... ನನಗೆ ಈಗಲೂ ಕೆಲವೊಮ್ಮೆ ಅನಿಸುತ್ತೆ ಮಗು ಆಗಬೇಕು ಅ೦ತ... ನಿಮಗೆ?
shivu.k said…
ಹೌದು. ನನಗೆ ಸದಾ ಕಾಲ ಮಗುವಾಗಬೇಕೆನಿಸುತ್ತದೆ. ಆಗ ಮಾತ್ರ ನಮ್ಮಲ್ಲಿ ಕುತೂಹಲ ಯಾವಾಗಲೂ, ಪ್ರತಿವಿಚಾರದಲ್ಲೂ ಇರುತ್ತದೆ. ಮತ್ತೊಂದು ವಿಷಯ ನೀವು ನನ್ನೆಲ್ಲಾ ಬ್ಲಾಗ್ ಓದಿ ಪ್ರತಿಕ್ರಿಯಿಸಿದ್ದೀರಿ. ಅದರಲ್ಲೂ ನನ್ನ ದಿನಪತ್ರಿಕೆಗಳ ಮೇಲಿನ ಬರವಣಿಗೆಗಳು ನಿಮ್ಮನ್ನೂ ತುಂಬಾ ದಿನ ಕಾಡಿದವೆಂದು ಹೇಳಿದ್ದೀರಿ. thanks. ನಿಮಗೆ ಅಂಥ ಅನಿಭವವಾಯಿತಲ್ಲ ಅದೇ ಸಂತೋಷ. ನಿಮ್ಮ ಮಾತುಗಳು ನನಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಈಗ ಮಾಡುತ್ತಿರುವ ಫೋಟೋಗ್ರಫಿ ಮತ್ತು ಬರವಣಿಗೆಯ ಕೃಷಿಯನ್ನು ಮತ್ತಷ್ಟು ಉರುಪಿನಿಂದ ಮಾಡಲು ನಿಮ್ಮ ಇಂಥ ಪ್ರತಿಕ್ರಿಯೆಗಳು ಸ್ಪೂರ್ತಿ.

ಆಹಾಂ! ಮತ್ತೊಂದು ವಿಚಾರ ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಹೊಸ ಮತ್ತೊಂದು ದಿನಪತ್ರಿಕೆ ಹುಡುಗರ ಲೇಖನವನ್ನು ಹಾಕಿದ್ದೇನೆ. ಅದು ನಿಜವಾದ, ನಡೆದ ಘಟನೆ. ನೀವು ಓದಿ ಪ್ರತಿಕ್ರಿಯಿಸಿ.
ಶಿವು.ಕೆ
ಸುಧೇಶ್,
ಮಗು ಆಗ ಬಯಸುವ ನಿಮ್ಮ ಕವನ ಚೆನ್ನಾಗಿದೆ.

ನಿಮ್ಮ ಬ್ಲಾಗು ನನ್ನ ಕಣ್ಣಿಗೆ ಬಿದ್ದದ್ದೇ ಇವತ್ತು.

ಅಂದ ಹಾಗೆ ನಾನು ಕೂಡ "ಮಗುವಾಗಬಾರದಿತ್ತೇ?" ಎಂಬ ಕವನ ಬರೆದಿದ್ದೀನಿ. ನೀವು ಒಮ್ಮೆ ಓದಿ. ವಿಷಯ ಬೇರೆ ಆದರೆ ನಮ್ಮಿಬ್ಬರಿಗೂ ಒಂದೆ ಆಸೆ "ಮಗುವಾಗಬಾರದಿತ್ತೇ?" :)

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ