Skip to main content

ಶಕು೦ತಲೆಗೆ……..

ಶಕು೦ತಲೆಗೆ……..
ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?

(ಈ ಕವನವನ್ನು ನಾನು ಬ್ಲಾಗ್ ಪ್ರಾರ೦ಭ ಮಾಡಿದ ಮೊದಲರಲ್ಲಿ ಹಾಕಿದ್ದೆ. ಆಗ ಯಾರೂ ಇದನ್ನು ಓದಿರಲ್ಲಿಲ್ಲ. ಅದಕ್ಕೆ ಈಗ ಪುನಃ ಒಮ್ಮೆ ಹಾಕಿದ್ದೇನೆ.)

Comments

ಚೆನ್ನಾಗಿದೆ ರೀ ಸುಧೇಶ್!
ಅರ್ಥಪೂರ್ಣವಾಗಿದೆ. ಹೌದಲ್ವ,ಅಷ್ಟೆಲ್ಲಾ ಆದರೂ ಶಕುಂತಲೆ ದುಶ್ಯ೦ತನೊಡನೆ ಹೇಗೆ ಜೀವನ ಸಾಗಿಸಿರಬಹುದು?
Veni said…
I had read it before itself. It is written nicely. Good work brother
ಯಂಡಮೂರಿ ಒಬ್ಬ ಸಕ್ಸೆಸ್ ಫುಲ್ ರೈಟರ್ ಆದ ಮೇಲೆ ಅವರ ಮೊದಲ ಕಾದಂಬರಿ ಮತ್ತೆ ಪ್ರಿಂಟ್ ಹಾಕಿಸಿದ್ರೆ ಅದೂ ಜನಪ್ರಿಯವಾಯ್ತಂತೆ.
ಹಾಗೆ ಬ್ಲಾಗ್ ಕೂಡ ಮೊದ ಮೊದಲು ನಾವು ಚೆನ್ನಾಗೇ ಬರೆದಿದ್ದರೂ ಬ್ಲಾಗ್ ಪ್ರಸಿದ್ಧವಾಗಿಲ್ಲದಿದ್ದರೆ ಯಾರೂ ಓದುವುದಿಲ್ಲ.

ಹಾಗೇ ಮಿಸ್ ಆಗಿ ಹೋಗುತ್ತಿದ್ದ ಒಂದು ಒಳ್ಳೆಯ ಕವನವನ್ನು ಮತ್ತೆ ಹಾಕಿದ್ದಕ್ಕೆ ಥ್ಯಾಂಕ್ಸ್ .
Geetha said…
ಎಲ್ಲೋ ಓದಿದ ಹಾಗಿದೆಯಲ್ಲ...ಎಂದು ಕೊಂಡೆ, ಕೊನೆಯ ಸಾಲು ಓದಿದ ಮೇಲೆ ತಿಳಿಯಿತು ಎಲ್ಲಿ ಓದಿದ್ದೆ ಅಂತ :)

ಒಳ್ಳೆಯ ಕವನ.ಶಕುಂತಲೆಗೆ ಒಂದು ಛಡಿ ಏಟು ಕೊಟ್ಟಂತಿದೆ, ಅಥವ ಕಾಳಿದಾಸನಿಗೋ?!
ಅಯ್ಯೋ ಮಾರಾಯ್ರೆ..ಎಂಥದ್ದು ನಿಮ್ಮ ಕತೆ?! ರಾಯರ ಕುದುರೆ ಕತ್ತೆಯಾಗಲಿಲ್ಲವಲ್ಲಾ..! ಬರೆಯಕೆ ಉದಾಸೀನ ಆಗಿ..ಹಳೆಯದನ್ನು ಹಾಕಿದ್ರೆ ನಾವು ಓದಲ್ಲ...ಹುಷಾರ್! ಬೇಗ ಬೇಗ ಅಪ್ ಡೇಟ್ ಮಾಡಿ. ಚೆನ್ನಾಗಿದೆ ಈ ಕವನ.
-ಧರಿತ್ರಿ
shivu.k said…
ಸುದೇಶ್.

ಕವನ ತುಂಬಾ ಚೆನ್ನಾಗಿದೆ.

ಶಕುಂತಲ ಮೇಲೆ ಬರೆದ ಕವನದಲ್ಲಿ ಪದಗಳ ಹಿಡಿತ ತುಂಬಾ ಚೆನ್ನಾಗಿದೆ...

ನೀವು ಹೇಳುವ ಮಾತು ನಾನು ಒಪ್ಪುತ್ತೇನೆ. ತುಂಬಾ ಚೆನ್ನಾಗಿರುವ ನಮಗಿಷ್ಟವಾಗುವ ಲೇಖನ ಅಥವ ಕವನಗಳು ನಾವು ಜನಪ್ರೀಯರಲ್ಲದಾಗ ಅವಕ್ಕೆ ಸರಿಯಾದ ಮುಕ್ತಿ ಸಿಕ್ಕಿರುವುದಿಲ್ಲ...ಒಮ್ಮೆ ನೀವು ಜನಪ್ರಿಯರಾಗಿ...ನಂತರ ಹಳೆಯವನ್ನೇ ಹೊಸತೆನ್ನುವಂತೆ ನೋಡುತ್ತಾರೆ..ಇಷ್ಟಪಡುತ್ತಾರೆ...
ಅದಕ್ಕೆ ಸಾಕ್ಷಿ...ನನ್ನ ಐವತ್ತನೇ ಲೇಖನ " ವೃದ್ದ ಮತ್ತು ಕರಿಬೇವು" ಅದನ್ನು ನಾನು ನನ್ನ ನಾಲ್ಕನೇ ಪೋಸ್ಟಿಂಗ್‌ನಲ್ಲಿ ಹಾಕಿದಾಗ ಯಾರು ನೋಡಿರಲಿಲ್ಲ...ಅದೇ ಅದನ್ನು ಐವತ್ತನೇ ಪೋಸ್ಟಿಂಗ್ ನಲ್ಲಿ ಹಾಕಿದ್ದಾಗ ಅದಕ್ಕೆ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ...

ಧನ್ಯವಾದಗಳು...
ಸುಧೇಶ್,

ಕವನ ಚೆನ್ನಾಗಿತ್ತು :)

ನೀವೇನು ಟಿ.ಎನ್.ಸೀತಾರಾಮ್ ಧಾರವಾಹಿ ರಿಪೀಟ್ ಮಾಡೊ ತರ ಇದನ್ನು ಹಾಕಿದ್ದೀರ... :)
Its a nice template , i must say its much better than the last one...
Little i did understood about this post, so no comments on that and for a beginner its a difficult thing to understand a poem ...
Seems like its shakuntala's love story...

I read her story long ago, not sure whether its the same you are talking about....

let me know in brief sometime..:)

Keep writing as usual..:)
Anonymous said…
sudhesh,
edde undu yeerna kavana.
-vinaya
Ittigecement said…
ಸುಧೇಶ್...

ಶಕುಂತಲೆಯ ಮನಸ್ಸು..,
ಭಾವನೆಗಳ..
ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ...

ಅಭಿನಂದನೆಗಳು...
ಗೀತಾ ಅವರೇ...

ಧನ್ಯವಾದಗಳು ಕವನವನ್ನ ಮೆಚ್ಚಿದ್ದಕ್ಕೆ.

ನನಗೂ ಆ ಸ೦ದೇಹವಿದೆ. ಅದು ಹೇಗೆ ಶಕು೦ತಲೇ ದುಶ್ಯ೦ತನೊಡನೆ ಬಾಳಿದಳು ಎ೦ದು. ಪ್ರೀತಿ ಅಷ್ಟೆಲ್ಲಾ ಮಾಡುತ್ತಾ?

ವೇಣಿ... ಧನ್ಯವಾದಗಳು ಕವನವನ್ನು ಮೆಚ್ಚಿದ್ದಕ್ಕೆ.

ಸ೦ದೀಪ್...

ಅದು ನಿಜ...

ಕವನಗಳು ಅರ್ಥವಾಗುವುದಿಲ್ಲ ಅನ್ನುತ್ತಿದ್ದವನು ಕವನಗಳನ್ನು ಮೆಚ್ಚಲು ಪ್ರಾರ೦ಬಿಸಿದ್ದೀಯಾ:) ಒಳ್ಳೆ ಲಕ್ಷಣ...

ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾ೦ಕ್ಸ್...

ಗೀತಾ ಅವರೇ...
:)

ಛಡಿಯೇಟು ಶಕು೦ತಲೆಗೆ...

ಧರಿತ್ರಿಯವ್ರೆ...

ಎ೦ತದು ಮಾರಾಯ್ತಿ...

ಈರೆನ ನೆರ್ಪನಿ ಓದುದು ಎನ್ನ ಕಲೀಗ್ ಎ೦ಕ್ ತಮಾಷೆ
ಮಲ್ತೊ೦ದು ಉಲ್ಲೆರ್... ನಿಕ್ಕ್ ಸರಿಯಾದ್ ಪ೦ಡೆರ್ ಆರ್... ಅ೦ಚೆನೆ ಆವೊಡು ನಿಕ್ಕ ಪ೦ಡ್ದ್...:):):)

ನಾನು ಬರೆಯುವುದು ತು೦ಬಾ ನಿಧಾನ... ಕೆಲಸ, ವಿದ್ಯಾಭ್ಯಾಸಗಳ ನಡುವೆ ಮನಸ್ಸು ಬರೆ ಅ೦ದಾಗ ಬರೆಯುತ್ತೇನೆ ಅಷ್ಟೆ...

ನೀವು ಚ೦ದದ ಚ೦ದದ ಲೇಖನಗಳನ್ನು ದಿನಕ್ಕೊ೦ದರ೦ತೆ ಬರೆಯುವುದನ್ನು ನೋಡಿದಾಗಲೆಲ್ಲಾ ನನಗನಿಸುವುದು ಅದು ಹೇಗೆ ಬರೆಯುತ್ತಾರೋ ಇವರು ಎ೦ದು.. ನನಗೆ ಅದಕ್ಕೆ ಹೊಟ್ಟೆಕಿಚ್ಚಿದೆ ನಿಮ್ಮ ಮೇಲೆ:)

ಶಿವಣ್ಣ...

ಧನ್ಯವಾದಗಳು ನನ್ನ ಕವನವನ್ನು ಮೆಚ್ಚಿದ್ದಕ್ಕೆ...

ಅ೦ತರ್ವಾಣಿಯವರೇ...

ಥ್ಯಾ೦ಕ್ಸ್ ಕವನವನ್ನು ಮೆಚ್ಚಿದ್ದಕ್ಕೆ...

ರಿಪೀಟ್ ಮಾಡಿದ್ದು ಹಾಗೆ ಸುಮ್ಮನೆ:)

ಮಹೇಶ್...

Will explain you this poem over telephone:)


ವಿನಯ ಅವರೇ...
ಥ್ಯಾ೦ಕ್ಸ್ ಕವನ ಮೆಚ್ಚಿದ್ದಕ್ಕೆ...

ಪ್ರಕಾಶಣ್ಣ...

ಕವನ ನಿಮಗೆ ಇಷ್ಟವಾಗಿದ್ದು ತಿಳಿದು ಖುಷಿಯಾಯಿತು...
Unknown said…
ಸುಧೇಶ್,
ಕವನ ಚೆನ್ನಾಗಿತ್ತು... ನಿಜ ಹೇಳ್ಬೇಕು ಅಂದ್ರೆ... ಶುರುತ್ತ ಕವನ (ಈರ ಬಾಲಿಶ ಅಂದ್ ಪನ್ಯ) ನೆರ್ದ್ ಶೋಕು ಇತ್ತುಂಡ್
ರವಿಕಾ೦ತ ಅವರೇ..
ಕವನ ಮೆಚ್ಚಿದ್ದಕ್ಕ ಥ್ಯಾ೦ಕ್ಸ್.... ಶುರುತ್ತ ಕವನ ಮಸ್ತ್ ಪಿರಾವುಡು ಬರೆತಿನ... ಈ ಕವನ ಯೇನ್ ಡಿಗ್ರಿಡ್ ಬರೆತಿನ...

ಸೊಲ್ಮೆಲು....
ನಿಮ್ಮ ಹೊಟ್ಟೆಗಿಚ್ಚು..ನನಗೆ ಇನ್ನೂ ಚೆನ್ನಾಗಿ ಬರೆಯಲು ಟಾನಿಕ್ ಆಯಿತಾ? ಈರೆನ ಕಲೀಗ್ ನಕುಲೆಕ್ ಥ್ಯಾಂಕ್ಸ್ ಪನ್ಲೆ..ಎಡ್ಡೆ ಆವೋಡು,.!!
-ಧರಿತ್ರಿ
Guruprasad said…
This comment has been removed by the author.
Guruprasad said…
hello ಸುಧೇಶ್ ...
ಕವನ ತುಂಬ ಚೆನ್ನಾಗಿ ಮೂಡಿ ಬಂದಿದೆ.. ಶಕುಂತಲೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರ... ಮುಂದುವರಿಸಿ.....
ಗುರು
Sudesh..

Please check for my replies on all your comments .... :)
ನಮ್ಮ ಹಳೆಯ ಕಥೆಗಳಿಗೆ ಮತ್ತೆ ಮತ್ತೆ ಹೀಗೆ ಹಿಂದಕ್ಕೆ ಹೋಗಿ ವಿಮರ್ಶಿಸಿಕೊಳ್ಳುವುದು ನನಗೆ ಒಂದು ರೀತಿ ವಿಸ್ಮಯವನ್ನುಂಟು ಮಾಡುತ್ತದೆ. ಅದು ಹೇಗೆ ನೀವು ಆ ರೀತಿ ಯೋಚಿಸುತ್ತೀರ ಅಂತ.

ಆದರೂ ಕವಿತೆಯಲ್ಲಿ ’ಕಾವ್ಯ’ ತುಂಬಾ ಚೆನ್ನಾಗಿ ಬಂದಿದೆ.

ನಾನು ಇದನ್ನು ಮುಂಚೆ ಓದಿರಲಿಲ್ಲ. ಸೋ, ನೀವು ಹಾಕಿದ್ದು ಒಳ್ಳೆಯದೇ ಆಯಿತು. :)

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ