ಶಕು೦ತಲೆಗೆ……..
ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?
(ಈ ಕವನವನ್ನು ನಾನು ಬ್ಲಾಗ್ ಪ್ರಾರ೦ಭ ಮಾಡಿದ ಮೊದಲರಲ್ಲಿ ಹಾಕಿದ್ದೆ. ಆಗ ಯಾರೂ ಇದನ್ನು ಓದಿರಲ್ಲಿಲ್ಲ. ಅದಕ್ಕೆ ಈಗ ಪುನಃ ಒಮ್ಮೆ ಹಾಕಿದ್ದೇನೆ.)
Comments
ಅರ್ಥಪೂರ್ಣವಾಗಿದೆ. ಹೌದಲ್ವ,ಅಷ್ಟೆಲ್ಲಾ ಆದರೂ ಶಕುಂತಲೆ ದುಶ್ಯ೦ತನೊಡನೆ ಹೇಗೆ ಜೀವನ ಸಾಗಿಸಿರಬಹುದು?
ಹಾಗೆ ಬ್ಲಾಗ್ ಕೂಡ ಮೊದ ಮೊದಲು ನಾವು ಚೆನ್ನಾಗೇ ಬರೆದಿದ್ದರೂ ಬ್ಲಾಗ್ ಪ್ರಸಿದ್ಧವಾಗಿಲ್ಲದಿದ್ದರೆ ಯಾರೂ ಓದುವುದಿಲ್ಲ.
ಹಾಗೇ ಮಿಸ್ ಆಗಿ ಹೋಗುತ್ತಿದ್ದ ಒಂದು ಒಳ್ಳೆಯ ಕವನವನ್ನು ಮತ್ತೆ ಹಾಕಿದ್ದಕ್ಕೆ ಥ್ಯಾಂಕ್ಸ್ .
ಒಳ್ಳೆಯ ಕವನ.ಶಕುಂತಲೆಗೆ ಒಂದು ಛಡಿ ಏಟು ಕೊಟ್ಟಂತಿದೆ, ಅಥವ ಕಾಳಿದಾಸನಿಗೋ?!
-ಧರಿತ್ರಿ
ಕವನ ತುಂಬಾ ಚೆನ್ನಾಗಿದೆ.
ಶಕುಂತಲ ಮೇಲೆ ಬರೆದ ಕವನದಲ್ಲಿ ಪದಗಳ ಹಿಡಿತ ತುಂಬಾ ಚೆನ್ನಾಗಿದೆ...
ನೀವು ಹೇಳುವ ಮಾತು ನಾನು ಒಪ್ಪುತ್ತೇನೆ. ತುಂಬಾ ಚೆನ್ನಾಗಿರುವ ನಮಗಿಷ್ಟವಾಗುವ ಲೇಖನ ಅಥವ ಕವನಗಳು ನಾವು ಜನಪ್ರೀಯರಲ್ಲದಾಗ ಅವಕ್ಕೆ ಸರಿಯಾದ ಮುಕ್ತಿ ಸಿಕ್ಕಿರುವುದಿಲ್ಲ...ಒಮ್ಮೆ ನೀವು ಜನಪ್ರಿಯರಾಗಿ...ನಂತರ ಹಳೆಯವನ್ನೇ ಹೊಸತೆನ್ನುವಂತೆ ನೋಡುತ್ತಾರೆ..ಇಷ್ಟಪಡುತ್ತಾರೆ...
ಅದಕ್ಕೆ ಸಾಕ್ಷಿ...ನನ್ನ ಐವತ್ತನೇ ಲೇಖನ " ವೃದ್ದ ಮತ್ತು ಕರಿಬೇವು" ಅದನ್ನು ನಾನು ನನ್ನ ನಾಲ್ಕನೇ ಪೋಸ್ಟಿಂಗ್ನಲ್ಲಿ ಹಾಕಿದಾಗ ಯಾರು ನೋಡಿರಲಿಲ್ಲ...ಅದೇ ಅದನ್ನು ಐವತ್ತನೇ ಪೋಸ್ಟಿಂಗ್ ನಲ್ಲಿ ಹಾಕಿದ್ದಾಗ ಅದಕ್ಕೆ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ...
ಧನ್ಯವಾದಗಳು...
ಕವನ ಚೆನ್ನಾಗಿತ್ತು :)
ನೀವೇನು ಟಿ.ಎನ್.ಸೀತಾರಾಮ್ ಧಾರವಾಹಿ ರಿಪೀಟ್ ಮಾಡೊ ತರ ಇದನ್ನು ಹಾಕಿದ್ದೀರ... :)
Little i did understood about this post, so no comments on that and for a beginner its a difficult thing to understand a poem ...
Seems like its shakuntala's love story...
I read her story long ago, not sure whether its the same you are talking about....
let me know in brief sometime..:)
Keep writing as usual..:)
edde undu yeerna kavana.
-vinaya
ಶಕುಂತಲೆಯ ಮನಸ್ಸು..,
ಭಾವನೆಗಳ..
ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ...
ಅಭಿನಂದನೆಗಳು...
ಧನ್ಯವಾದಗಳು ಕವನವನ್ನ ಮೆಚ್ಚಿದ್ದಕ್ಕೆ.
ನನಗೂ ಆ ಸ೦ದೇಹವಿದೆ. ಅದು ಹೇಗೆ ಶಕು೦ತಲೇ ದುಶ್ಯ೦ತನೊಡನೆ ಬಾಳಿದಳು ಎ೦ದು. ಪ್ರೀತಿ ಅಷ್ಟೆಲ್ಲಾ ಮಾಡುತ್ತಾ?
ವೇಣಿ... ಧನ್ಯವಾದಗಳು ಕವನವನ್ನು ಮೆಚ್ಚಿದ್ದಕ್ಕೆ.
ಸ೦ದೀಪ್...
ಅದು ನಿಜ...
ಕವನಗಳು ಅರ್ಥವಾಗುವುದಿಲ್ಲ ಅನ್ನುತ್ತಿದ್ದವನು ಕವನಗಳನ್ನು ಮೆಚ್ಚಲು ಪ್ರಾರ೦ಬಿಸಿದ್ದೀಯಾ:) ಒಳ್ಳೆ ಲಕ್ಷಣ...
ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾ೦ಕ್ಸ್...
ಗೀತಾ ಅವರೇ...
:)
ಛಡಿಯೇಟು ಶಕು೦ತಲೆಗೆ...
ಧರಿತ್ರಿಯವ್ರೆ...
ಎ೦ತದು ಮಾರಾಯ್ತಿ...
ಈರೆನ ನೆರ್ಪನಿ ಓದುದು ಎನ್ನ ಕಲೀಗ್ ಎ೦ಕ್ ತಮಾಷೆ
ಮಲ್ತೊ೦ದು ಉಲ್ಲೆರ್... ನಿಕ್ಕ್ ಸರಿಯಾದ್ ಪ೦ಡೆರ್ ಆರ್... ಅ೦ಚೆನೆ ಆವೊಡು ನಿಕ್ಕ ಪ೦ಡ್ದ್...:):):)
ನಾನು ಬರೆಯುವುದು ತು೦ಬಾ ನಿಧಾನ... ಕೆಲಸ, ವಿದ್ಯಾಭ್ಯಾಸಗಳ ನಡುವೆ ಮನಸ್ಸು ಬರೆ ಅ೦ದಾಗ ಬರೆಯುತ್ತೇನೆ ಅಷ್ಟೆ...
ನೀವು ಚ೦ದದ ಚ೦ದದ ಲೇಖನಗಳನ್ನು ದಿನಕ್ಕೊ೦ದರ೦ತೆ ಬರೆಯುವುದನ್ನು ನೋಡಿದಾಗಲೆಲ್ಲಾ ನನಗನಿಸುವುದು ಅದು ಹೇಗೆ ಬರೆಯುತ್ತಾರೋ ಇವರು ಎ೦ದು.. ನನಗೆ ಅದಕ್ಕೆ ಹೊಟ್ಟೆಕಿಚ್ಚಿದೆ ನಿಮ್ಮ ಮೇಲೆ:)
ಶಿವಣ್ಣ...
ಧನ್ಯವಾದಗಳು ನನ್ನ ಕವನವನ್ನು ಮೆಚ್ಚಿದ್ದಕ್ಕೆ...
ಅ೦ತರ್ವಾಣಿಯವರೇ...
ಥ್ಯಾ೦ಕ್ಸ್ ಕವನವನ್ನು ಮೆಚ್ಚಿದ್ದಕ್ಕೆ...
ರಿಪೀಟ್ ಮಾಡಿದ್ದು ಹಾಗೆ ಸುಮ್ಮನೆ:)
ಮಹೇಶ್...
Will explain you this poem over telephone:)
ವಿನಯ ಅವರೇ...
ಥ್ಯಾ೦ಕ್ಸ್ ಕವನ ಮೆಚ್ಚಿದ್ದಕ್ಕೆ...
ಪ್ರಕಾಶಣ್ಣ...
ಕವನ ನಿಮಗೆ ಇಷ್ಟವಾಗಿದ್ದು ತಿಳಿದು ಖುಷಿಯಾಯಿತು...
ಕವನ ಚೆನ್ನಾಗಿತ್ತು... ನಿಜ ಹೇಳ್ಬೇಕು ಅಂದ್ರೆ... ಶುರುತ್ತ ಕವನ (ಈರ ಬಾಲಿಶ ಅಂದ್ ಪನ್ಯ) ನೆರ್ದ್ ಶೋಕು ಇತ್ತುಂಡ್
ಕವನ ಮೆಚ್ಚಿದ್ದಕ್ಕ ಥ್ಯಾ೦ಕ್ಸ್.... ಶುರುತ್ತ ಕವನ ಮಸ್ತ್ ಪಿರಾವುಡು ಬರೆತಿನ... ಈ ಕವನ ಯೇನ್ ಡಿಗ್ರಿಡ್ ಬರೆತಿನ...
ಸೊಲ್ಮೆಲು....
-ಧರಿತ್ರಿ
ಕವನ ತುಂಬ ಚೆನ್ನಾಗಿ ಮೂಡಿ ಬಂದಿದೆ.. ಶಕುಂತಲೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರ... ಮುಂದುವರಿಸಿ.....
ಗುರು
Please check for my replies on all your comments .... :)
ಆದರೂ ಕವಿತೆಯಲ್ಲಿ ’ಕಾವ್ಯ’ ತುಂಬಾ ಚೆನ್ನಾಗಿ ಬಂದಿದೆ.
ನಾನು ಇದನ್ನು ಮುಂಚೆ ಓದಿರಲಿಲ್ಲ. ಸೋ, ನೀವು ಹಾಕಿದ್ದು ಒಳ್ಳೆಯದೇ ಆಯಿತು. :)